ಶಿವಮೊಗ್ಗ: ವಯೋಸಹಜವಾಗಿ ಮೃತಪಟ್ಟ ತನ್ನ ತಾತನ ಅಂತ್ಯಕ್ರಿಯೆಯನ್ನು ಸಾಕು ಮೊಮ್ಮಗಳು ನೆರವೇರಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಸಮೀಪದ ಬಸವನಗುಡಿ ಗ್ರಾಮದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಬಸವನಗುಡಿ ಗ್ರಾಮದ ನಂಜುಂಡಪ್ಪ(104) ಮೃತಪಟ್ಟಿದ್ದರು. ಮೃತ ನಂಜುಂಡಪ್ಪ ಅವರ ಇಬ್ಬರು ಗಂಡು ಮಕ್ಕಳು ಈ ಹಿಂದೆಯೇ ಮೃತಪಟ್ಟಿದ್ದರು. ಹಾಗೂ ಇದ್ದ ಒಬ್ಬಳೇ ಹೆಣ್ಣು ಮಗಳು ಬೇರೊಂದು ಗ್ರಾಮದಲ್ಲಿ ವಾಸವಿದ್ದು, ಆಕೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದನ್ನೂ ಓದಿ: ಡಾ. ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಶೋಕ
ಆದರೆ ಮೃತ ವೃದ್ಧನ ಶವ ಸಂಸ್ಕಾರಕ್ಕೆ ಆತನ ಮೊಮ್ಮಕ್ಕಳು ಬಾರದೇ ಇದ್ದಿದ್ದರಿಂದ, ತಾನು ದತ್ತು ತೆಗದುಕೊಂಡು ಸಾಕಿದ್ದ ಮೊಮ್ಮಗಳು ಅಶ್ವಿನಿ ಎಂಬ ಯುವತಿಯೇ ಮುಂದೆ ನಿಂತು ತನ್ನ ತಾತನ ಅಂತಿಮ ವಿಧಿ-ವಿಧಾನಗಳನ್ನು ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಿಸಿದ್ದಾರೆ.