ಹೈದರಾಬಾದ್: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಭಾರತದ ಹಲವು ರಾಜ್ಯಗಳಲ್ಲಿ ತೆಲಂಗಾಣ ಕೂಡ ಒಂದು. ರಾಜ್ಯದ ಚಿಕ್ಕ ಜಿಲ್ಲೆಗಳಲ್ಲಿ ಕೋವಿಡ್-19 ಸೋಕು ಹೆಚ್ಚಳವಾಗುತ್ತಿದ್ದರೂ ತೆಲಂಗಾಣ ರಾಜಕೀಯ ನಾಯಕರು ತಲೆಕೆಡಿಸಿಕೊಂಡಿಲ್ಲ.
- Advertisement 2
ಸಾರ್ವಕನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸುವಂತೆ ಭಾನುವಾರ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿತ್ತು. ಜೊತೆಗೆ ಕೊರೊನಾ ನಿಯಮ ಉಲ್ಲಂಘಿಸುವವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಈ ಆದೇಶ ಹೊರಡಿಸಿದ 24 ಗಂಟೆಗಳ ನಂತರ ತೆಲಂಗಾಣ ಕ್ಯಾಬಿನೆಟ್ನ ಇಬ್ಬರು ಮಂತ್ರಿಗಳು ಕೊರೊನಾ ನಿಯವನ್ನು ಉಲ್ಲಂಘಿಸಿದ್ದಾರೆ.
- Advertisement 3
- Advertisement 4
ತೆಲಂಗಾಣದ ಪಶುಸಂಗೋಪನಾ ಸಚಿವ ಟಿ. ಶ್ರೀನಿವಾಸ್ ಯಾದವ್ ಮತ್ತು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀನಿವಾಸ್ ಗೌಡ್ರವರು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಅಭ್ಯರ್ಥಿ ನಾಗಾರ್ಜುನ್ ಸಾಗರ್ ಪರವಾಗಿ ಮತಪ್ರಚಾರ ನಡೆಸಿದರು. ಈ ವೇಳೆ ಇಬ್ಬರು ಮಂತ್ರಿಗಳು ರ್ಯಾಲಿ ವೇಳೆ ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ.
ಭಾನುವಾರ ತೆಲಂಗಾಣದಲ್ಲಿ 3,187 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಇದು ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾದ ದಿನವಾಗಿದೆ.