ಬೆಂಗಳೂರು: ಸಾವರ್ಕರ್ ಗಣೇಶೋತ್ಸವಕ್ಕೆ ಕರೆಕೊಟ್ಟ ಯುವಾ ಬಿಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯಿಂದ ಈಗ ಸಾವರ್ಕರ್ ಪುಸ್ತಕವನ್ನು ಮನೆ ಮನೆಗೆ ತಲುಪಿಸಲು ಮುಂದಾಗಿದ್ದಾರೆ.
ಕೇವಲ ಆರು ರೂಪಾಯಿಗೆ ಸಾವರ್ಕರ್ ಪುಸ್ತಕವನ್ನು ಮಾರಾಟ ಮಾಡುವುದಾಗಿ ಹೇಳಿದ್ದಾರೆ. ಸಾವರ್ಕರ್ ಯಾತನೆ ಸಾಹಸ ಅವಮಾನಗಳ ಬಗ್ಗೆ ಬರೆದಿರುವ ಪುಸ್ತಕವನ್ನು ಅತಿ ಕಡಿಮೆ ಬೆಲೆಯಲ್ಲಿ ತಲುಪಿಸಲಿದ್ದೇವೆ ಎಂದು ಸೂಲಿಬೆಲೆ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶನ ಹಬ್ಬದಂದೇ ಅದ್ಧೂರಿ ಸಾವರ್ಕರ್ ಉತ್ಸವ ಆಚರಣೆಗೆ ಸಿದ್ಧತೆ
ಪೋಸ್ಟ್ನಲ್ಲಿ ಏನಿದೆ?
ಸಾವರ್ಕರ್ ಸಾಹಸ, ಯಾತನೆ ಮತ್ತು ಅವಮಾನಗಳ ಕುರಿತ ಪುಟ್ಟ ಕೃತಿಯೊಂದು ಸಿದ್ಧವಾಗಿದೆ. ಈ ಕೃತಿಯನ್ನು ಎಲ್ಲರಿಗೂ ಕೈಗೆಟುಕುವಂತೆ ಆರೇ ರೂಪಾಯಿಗೆ ಕೊಡಬೇಕೆಂದು ನಿಶ್ಚಯಿಸಲಾಗಿದೆ. ಹೀಗಾಗಿ ಈ ಪುಸ್ತಕವನ್ನು ಹಂಚಬೇಕೆಂದು ಬಯಸುವವರು ಈ ಸಂಖ್ಯೆಗೆ ವಾಟ್ಸಪ್ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಡಬಹುದು. ಒಂದು ಪ್ರತಿಗೆ ಆರು ರೂಪಾಯಿ ಇರುವುದರಿಂದ ಕನಿಷ್ಠ ನೂರು ಪ್ರತಿಗಳನ್ನಾದರೂ ತರಿಸಿಕೊಳ್ಳುವವರಿಗೆ ಮೊದಲ ಆದ್ಯತೆ. ಒಂದು-ಎರಡು ಪ್ರತಿಗಳು ಬೇಕಾದವರು ಸ್ಥಳೀಯ ಕಾರ್ಯಕರ್ತರನ್ನು ಸಂಪರ್ಕಿಸಬಹುದು. ಸಂಪರ್ಕಿಸಿ – 72597 44503, 91138 96395