ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ, ಆಹ್ಲಾದಕರ ವಾತಾವರಣ, ಹಸಿರು ಸಿರಿಯ ನಡುವೆ ಅರುಣೋದಯ, ಸೂರ್ಯಾಸ್ತಮದ ದೃಶ್ಯ ಕಣ್ತುಂಬಿಕೊಳ್ಳೋದೇ ಒಂದು ಸೊಗಸು. ಆದರೆ ಈ ಅದ್ಭುತದ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬೇಕೆಂದು ಎಲ್ಲರ ಆಸೆ. ಆ ಒಂದು ಫೋಟೋಗಾಗಿ ಪ್ರವಾಸಿಗರು ಪ್ರಾಣವನ್ನೇ ಪಣಕ್ಕಿಟ್ಟು ಹುಚ್ಚು ಸಾಹಸ ಮಾಡುತ್ತಿದ್ದಾರೆ.
ಒಂದೆಡೆ ಮಂಟಪ ಹತ್ತುವುದಕ್ಕೆ ಸರ್ಕಸ್, ಮತ್ತೊಂದೆಡೆ ಹತ್ತೋದು ಹತ್ತಿದ್ದಾಯ್ತು ಇಳಿಯೋದು ಹೆಂಗೆ ಎಂದು ಯುವಕ-ಯುವತಿಯರು ಚಿಂತೆ ಪಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಸೆಲ್ಫಿಗಾಗಿ ಇಲ್ಲಿಗೆ ಬರೋ ಸಾವಿರಾರು ಪ್ರವಾಸಿಗರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸರ್ಕಸ್ ಮಾಡುತ್ತಿದ್ದಾರೆ. ಮನಮೋಹಕ ದೃಶ್ಯದ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
- Advertisement 2
- Advertisement 3
ಈಗಾಗಲೇ ಈ ಮಂಟಪಗಳು ಶಿಥಿಲಾವಸ್ಥೆಗೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿಯಬಹುದು. ಇದರ ಮೇಲೆ ಹತ್ತುವುದು ಅಪಾಯ ಅಂತ ಬೋರ್ಡ್ ಹಾಕಿದರೂ ಅದನ್ನೇ ಅಡಿಪಾಯ ಮಾಡಿಕೊಂಡು ಪ್ರವಾಸಿಗರು ಮಂಟಪ ಏರುತ್ತಿದ್ದಾರೆ. ಇವರಿಗೆ ತಮ್ಮ ಜೀವದ ಬಗ್ಗೆ ಭಯವೇ ಇಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
- Advertisement 4
ಒಂದು ದಿನದ ಎಂಜಾಯ್ ಮೆಂಟ್ಗೆ ಅಂತ ಸಾವಿರಾರು ಪ್ರವಾಸಿಗರು ನಂದಿ ಹಿಲ್ಸ್ ಗೆ ಬರುತ್ತಾರೆ. ಆದರೆ ಮೋಜಿನ ನಡುವೆ ಯಾರಾದರೂ ಬಿದ್ದು ಕೈ, ಕಾಲು ಕಳೆದುಕೊಂಡರೆ, ಪ್ರಾಣ ಹಾನಿಯಾದರೆ ಯಾರು ಹೊಣೆ. ಇನ್ನಾದರೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಭದ್ರತೆ ಒದಗಿಸಬೇಕಿದೆ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv