ಬೆಂಗಳೂರು: ಮಾರತಹಳ್ಳಿಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೇಕೊಳಾಲದಲ್ಲಿ ಸೋಮವಾರ ರಾತ್ರಿ ಯುವಕನೊಬ್ಬನ ಬರ್ಬರ ಕೊಲೆಯಾಗಿದೆ.
ಕಳ್ಳತನದ ಆರೋಪದ ಮೇಲೆ ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಒಬ್ಬನ ಕೊಲೆ ಮಾಡಲಾಗಿದ್ದು, ಇನ್ನಿಬ್ಬರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ಪಶ್ಚಿಮ ಬಂಗಾಳ ಮೂಲದ ಬಷೀರ್ಗೆ ನಾಲ್ವರು ದುಷ್ಕರ್ಮಿಗಳು ಬೆಳಗಿಂದ ಸಂಜೆಯವರೆಗೂ ಕಿರುಕುಳ ನೀಡಿ, ನಂತರ ಆತನನ್ನ ಕೊಲೆ ಮಾಡಿದ್ದಾರೆ.
- Advertisement 2
- Advertisement 3
ಬಷೀರ್ ಒಂದು ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದು ಪಶ್ಚಿಮ ಬಂಗಾಳದಿಂದ ಗುಜರಿ ಕೆಲಸ ಹುಡುಕಿಕೊಂಡು 2 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಬಸುರೆಡ್ಡಿ ಎಂಬವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಇವರೆಲ್ಲರೂ ವಾಸ ಮಾಡುತ್ತಿದ್ದರು.
- Advertisement 4
ಸದ್ಯ ಬಷೀರ್ ಮೃತದೇಹವನ್ನು ವೈದೇಹಿ ಆಸ್ಪತ್ರೆಯಲ್ಲಿಡಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಗಂಭೀರವಾಗಿ ಗಾಯಗೊಂಡಿರುವ ಹಫೀಸುಲ್ಲಾ ಹಾಗೂ ಅಜ್ಮೈಲ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಟರ್ ಟ್ಯಾಂಕರ್ ಮಾಲೀಕ ಬಸುರೆಡ್ಡಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮಾರತಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.