ಹಾಸನ: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯ ಕತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಕಳ್ಳ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ, ಅಕ್ಕಿ ಕುರುಬರ ಬೀದಿಯಲ್ಲಿ ಇಂದು ನಡೆದಿದೆ.
ಬೆಳಗ್ಗೆ 6.30ರ ಸಮಯದಲ್ಲಿ ಸರಸ್ವತಿ ಎಂಬವರು ರಂಗೋಲಿ ಹಾಕುವಾಗ, ಕೆಲ ಹೊತ್ತು ಹೊಂಚು ಹಾಕಿಕೊಂಡು ಹೆಲ್ಮೆಟ್ ಧರಿಸಿ ಖದೀಮ ಬಂದಿದ್ದಾನೆ. ಆತನನ್ನು ನೋಡಿದ ಸರಸ್ವತಿ ಸುಮ್ಮನಾಗಿ ರಂಗೋಲಿ ಬಿಡುವುದನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಬೈಕ್ನಿಂದಲೇ ಕೇಕ್ ಕಟ್ ಮಾಡಿಸಿ – ಗೆಳೆಯರಿಗೆ ಬಿಂದಾಸ್ ಪಾರ್ಟಿ ಕೊಟ್ಟ
ಈ ವೇಳೆ ಹಿಂದೆಯಿಂದ ಬಂದು ಏಕಾಏಕಿ ಸರಸ್ವತಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕೀಳಲು ಯತ್ನಿಸಿದ್ದಾನೆ. ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ಬಿಟ್ಟಿಲ್ಲ. ಮಹಿಳೆ ಕಿರಿಚಾಡುತ್ತಿದ್ದಂತೆ ರಂಗೋಲಿಯನ್ನು ಮುಖದ ಮೇಲೆ ಎರಚಿ 40 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಶ್ವಿನಿ ವೈಷ್ಣವ್ ಲಾಸ್ಟ್ ವಾರ್ನಿಂಗ್
ಕಳ್ಳ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.