ಚಾಮರಾಜನಗರ: ಪತಿ ಸಾವಿನ ಬಳಿಕ ಲೈನ್ ಮ್ಯಾನ್ (Line Man) ಒಬ್ಬನ ಗೆಳೆತ ಬೆಳೆಸಿದಾಕೆಯು ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆದರ್ಶನಗರದ ಮನೆಯೊಂದರಲ್ಲಿ ರೇಖಾ (26) ಮೃತದೇಹ ಪತ್ತೆಯಾಗಿದೆ.
27 ವರ್ಷದ ಅಗರ ಗ್ರಾಮದ ನಿವಾಸಿ ರೇಖಾಳ ಪತಿ ಕಳೆದ ಎರಡು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಸಾವಿನ ಬಳಿಕ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದ್ ಸಹವಾಸದಲ್ಲಿದ್ದಳು. ಇಬ್ಬರ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್ ಮನೆಗೆ ತಿಳಿದು ಗಲಾಟೆ ನಡೆದಿತ್ತು. ಮನೆಯಲ್ಲಿ ಗಲಾಟೆ ಗದ್ದಲವಾದ್ರು, ನಾಗೇಂದ್ರ ಗೆಳೆತನವನ್ನು ಮಾತ್ರ ರೇಖಾ ಬಿಟ್ಟಿರಲಿಲ್ಲ. ಈಗ ಅದೇ ಗೆಳೆಯ ನಾಗೇಂದ್ರ ಮನೆಯಲ್ಲಿ ರೇಖಾಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲೊಂದು ಅಮಾನವೀಯ ಘಟನೆ – ಘೋರ ದುರಂತದಲ್ಲೂ ಪ್ರಾಣಾಪಾಯದಿಂದ ಪಾರಾದ ಮಗು
ಗೆಳೆಯ ನಾಗೇಂದ್ರನೇ ರೇಖಾಳನ್ನ ಹೊಡೆದು ಕೊಂದಿರುವ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಕೊಳ್ಳೇಗಾಲ ಪೆÇಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮರಣೋತ್ತರ ಪರೀಕ್ಷೆಗಾಗಿ ರೇಖಾಳ ಮೃದೇಹವನ್ನ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದರು. ಈ ವೇಳೆ ಯಾವುದೇ ಕಾರಣಕ್ಕೂ ಶವ ಮುಟ್ಟದಂತೆ ಮೃತಳ ಸಂಬಂಧಿಕರು ಗಲಾಟೆ ಮಾಡಿದ್ದಾರೆ.
ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.