ಬೆಂಗಳೂರು: ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ ಮಾಡುತ್ತಿದ್ದ ಬಾಯ್ ಫ್ರೆಂಡ್ ವರ್ತನೆಯಿಂದ ಬೇಸತ್ತು ಪ್ರಿಯತಮೆ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಪ್ರಿಯಕರ ಮುತ್ತುರಾಜ್ ನನ್ನು ಪ್ರೇಯಸಿ ಸುನಂದಾ ಎಂಬಾಕೆ ಕೊಲೆ ಮಾಡಿದ್ದಾಳೆ.
ಏನಿದು ಘಟನೆ?: ಖಾಸಗಿ ಬಸ್ ನಿರ್ವಾಹಕನಾಗಿರೋ ಮುತ್ತುರಾಜ್ ಸುನಂದಾ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಪ್ರತಿನಿತ್ಯ ಕುಡಿದು ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಡ ಹೇರುತ್ತಿದ್ದನು. ತನ್ನ ಪ್ರಿಯಕರನ ಈ ವರ್ತನೆಯಿಂದ ಬೇಸತ್ತ ಸುನಂದಾ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತ್ರ ಕುಡಿದ ಮತ್ತಿನಲ್ಲಿ ಆತ ಸಾವನ್ನಪ್ಪಿರುವುದಾಗಿ ಬಿಂಬಿಸಲು ಮುಂದಾಗಿದ್ದಳು. ಅಲ್ಲದೇ ಆತನ ಮೃತದೇಹವನ್ನು ಪಕ್ಕದ ರೋಡಿಗೆ ತಂದು ಎಸೆದಿದ್ದಳು. ಆದರೂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅದು ಕುಡಿತದಿಂದಾದ ಸಾವಲ್ಲ. ಉಸಿರುಗಟ್ಟಿಸಿ ನಡೆಸಿರುವ ಕೃತ್ಯ ಎಂಬ ಅಂಶ ಬೆಳಕಿಗೆ ಬಂದಿದೆ.
ಮರಣೋತ್ತರ ವರದಿ ಕೈ ಸೇರುತ್ತಿದ್ದಂತೆಯೇ ಕೋಣನಕುಂಟೆ ಪೊಲೀಸರು ಆರೋಪಿ ಸುನಂದಾಳನ್ನು ಬಂಧಿಸಿದ್ದಾರೆ. ಈಕೆಯ ವಿಚಾರಣೆಯ ವೇಳೆ ಮುತ್ತುರಾಜ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಳು ಎಂದು ಬಾಯ್ಬಿಟ್ಟಿದ್ದಾಳೆ.