ಬೆಂಗಳೂರು: ರಾಜ್ಯದ ಜನರಿಗೆ ದಿನೇ ದಿನೇ ಒಂದಿಲ್ಲೊಂದು ರೀತಿಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟುತ್ತಲೇ ಇದೆ. ಇದೀಗ ಹಾಲು ಉತ್ಪಾದಕರ ಒಕ್ಕೂಟ ಲೀಟರ್ ಹಾಲಿಗೆ 8 ರೂ. ಏರಿಕೆ (Milk Price) ಮಾಡುವಂತೆ ಡಿಮ್ಯಾಂಡ್ ಮಾಡಿದೆ.
ಈಗಾಗಲೇ ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನ ಸಾಮಾನ್ಯರಿಗೆ ಮತ್ತೊಂದು ಆಘಾತ ಕಾದಿದೆ. ಕಳೆದ ವರ್ಷವಷ್ಟೇ ಏರಿಕೆ ಕಂಡಿದ್ದ ನಂದಿನಿ ಹಾಲಿನ (Nandini Milk) ದರ ಈಗ ಮತ್ತೆ ಬೆಲೆ ಏರಿಕೆಗೆ ಸೈಲೈಂಟ್ ಆಗಿ ಸಜ್ಜಾಗಿದೆ. ಬರೋಬ್ಬರಿ ಲೀಟರ್ಗೆ 8 ರೂ ಏರಿಕೆಗೆ ಹಾಲು ಉತ್ಪಾದಕರ ಸಂಘ ಪ್ರಸ್ತಾವನೆ ಇಟ್ಟಿದೆ. ಇದನ್ನೂ ಓದಿ: ಭೀಕರ ಬರ ಎದುರಿಸುತ್ತಿದ್ದರೂ ರಾಮದುರ್ಗ, ಸವದತ್ತಿಯನ್ನು ಕೈಬಿಟ್ಟ ಸರ್ಕಾರ – ಅನ್ನದಾತರಿಗೆ ಆಘಾತ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಹಾಲು ಉತ್ಪಾದಕರ ಒಕ್ಕೂಟ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಲೀಟರ್ ಹಾಲಿಗೆ 8 ರೂ. ಹಾಗೂ ರೈತರ ಪ್ರೋತ್ಸಾಹ ಧನವನ್ನು 8 ರೂ.ಗೆ ಏರಿಸಲು ಒತ್ತಾಯಿಸಿದೆ. ಕಳೆದ 8 ತಿಂಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರೈತರ ಹಿತ ಕಾಪಾಡಬೇಕು. ಹೀಗಾಗಿ ದರ ಏರಿಕೆ ಮಾಡಬೇಕು. ಬೆಲೆ ಹೆಚ್ಚಳ ಮಾಡದಿದ್ದರೆ ಮೂರು ದಿನದಲ್ಲಿ ವಿಧಾನಸೌಧ ಚಲೋ ಮಾಡ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಇನ್ನು ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಒಕ್ಕೂಟ ನಾನಾ ಕಾರಣಗಳನ್ನು ನೀಡಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರಿಗೆ ನೆರವಾಗಲು ದರ ಏರಿಕೆ ಮಾಡಬೇಕೆಂದು ಆಗ್ರಹಿಸಿವೆ.ಇದನ್ನೂ ಓದಿ: ನಿವೃತ್ತಿಯ ದಿನವೇ 1.01 ಕೋಟಿ ದೇಣಿಗೆ – PM CARESಗೆ ನ್ಯಾ.ಅವನೀಂದ್ರ ಕುಮಾರ್ ಸಿಂಗ್ ಕೊಡುಗೆ
ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಕಾರಣ:
ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಶೇ.70ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ಹುಲ್ಲಿನ ಕೊರತೆಯಾಗಿದ್ದು, ಪಶು ಆಹಾರದ ಕಚ್ಚಾ ಸಾಮಗ್ರಿ, ಮೆಕ್ಕೆಜೋಳ, ಇಂಡಿ-ಬೂಸಾದ ದರ ಶೇ.25ರಷ್ಟು ಏರಿಕೆಯಾಗಿದೆ. ರಾಸುಗಳಿಗೆ ಬಳಸುವ ನೆಲಹಾಸು ದರ ಹೆಚ್ಚಳವಾಗಿದ್ದು, ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಮಾಡಬೇಕು ಎಂದು ಒಕ್ಕೂಟ ಪ್ರಸ್ತಾವನೆ ಇಟ್ಟಿದೆ. ಒಟ್ಟಾರೆ, ರಾಜ್ಯದ ಜನರಿಗೆ ದರ ಏರಿಕೆಯ ಬಿಸಿ ಸುಡುತ್ತಿರುವಾಗಲೇ ಮತ್ತೊಂದು ಶಾಕ್ ಸಿಗೋದು ಬಹುತೇಕ ಖಚಿತವಾಗಿದೆ.ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಇನ್ಸ್ಟಾದಲ್ಲಿ ಅವಹೇಳನ; ಯುವಕನಿಗೆ ಹೈಕೋರ್ಟ್ ತರಾಟೆ

