ಮೈಸೂರು: ನಟರು (Actors) ಸಾಂಸ್ಕೃತಿಕ ವ್ಯಕ್ತಿಗಳು, ಸಾಂಸ್ಕೃತಿಕವಾಗಿಯೇ ಇರಬೇಕು. ಈ ರಾಜಕೀಯ ಹಂಗು, ಹಗರಣದಲ್ಲಿ ಯಾಕೆ ಸಿಕ್ಕಿಹಾಕಿಕೊಳ್ತಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಪ್ರಶ್ನಿಸಿದ್ದಾರೆ.
ನಟ ಕಿಚ್ಚ ಸುದೀಪ್ (Kichcha Sudeepa), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬೆಂಬಲ ಘೋಷಣೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ, ಮತದಾನದಂತಹ ಪ್ರಕ್ರಿಯೆಗಳಲ್ಲಿ ಮತದಾರನ ಮನಸ್ಸನ್ನ ನಟರು ಆಕರ್ಷಣೆ ಮಾಡಿಬಿಡ್ತಾರೆ ಅನ್ನೋದು ಸುಳ್ಳು. ಸುಮ್ಮನೇ ಶೋಕಿಗೆ ಕರೆತರಬೇಕು ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ
ನಟರು ಮತದಾರನ ಹೃದಯದಲ್ಲಿ ಇಳಿಯಲು ಸಾಧ್ಯವಿಲ್ಲ. ಅವರು ಸಾಂಸ್ಕೃತಿಕ ವ್ಯಕ್ತಿಗಳು, ಸಾಂಸ್ಕೃತಿಕವಾಗಿಯೇ ಇರಬೇಕು. ಈ ರಾಜಕೀಯ ಹಂಗು, ಹಗರಣದಲ್ಲಿ ಯಾಕೆ ಸಿಕ್ಕಿಹಾಕಿಕೊಳ್ತಾರೆ ಅನ್ನೋದು ಗೊತ್ತಾಗ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತ ವೀಡಿಯೋ ಇಲ್ಲಿದೆ.. ಇದನ್ನೂ ಓದಿ: ಸುದೀಪ್ ಸುಮ್ಮನಿದ್ದರೂ ಬಿಡುತ್ತಿಲ್ಲ ಪ್ರಕಾಶ್ ರೈ: ಮಾಮನೋ.. ಅತ್ತೆನೋ..