ಮಂಡ್ಯ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಹಿನ್ನೆಲೆ ಇಂದು 11ನೇ ದಿನದ ಪುಣ್ಯತಿಥಿಯನ್ನು ಬೆಂಗಳೂರಿನಲ್ಲಿ ಕುಟುಂಬಸ್ಥರು ನೇರವೇರಿಸಿದ್ದರೆ, ಇತ್ತ ಕಾವೇರಿ ನದಿ ಬಳಿ ನಟ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿ ಅವರು ಪುನೀತ್ ಅವರ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
- Advertisement 2
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಬಳಿಯ ಕಾವೇರಿ ನದಿಯ ಸಂಗಮದಲ್ಲಿ ವಿನೋದ್ ರಾಜ್ ಹಾಗೂ ಲೀಲಾವತಿ ಅವರು ಪುನೀತ್ ಆತ್ಮಕ್ಕೆ ಸದ್ಗತಿ ದೊರಕುವಂತೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ – ಕಣ್ಣು ದಾನ ಮಾಡಿದ ಅಪ್ಪು ಅಭಿಮಾನಿ
- Advertisement 3
- Advertisement 4
ಈ ವೇಳೆ ಮೊದಲಿಗೆ ಇವರು ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆಯನ್ನು ಕಾವೇರಿ ನದಿ ತೀರದಲ್ಲಿ ಮಾಡಿದರು. ಬಳಿಕ ಕಾವೇರಿ ನದಿಗೆ ವಿನೋದ್ ರಾಜ್ ಅವರು ತರ್ಪಣ ಬಿಟ್ಟು, ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು.