ಚಾಮರಾಜನಗರ: ಟೊಮೆಟೋ ಕ್ರೇಟ್ಗಳ (Tomato Crate) ನಡುವೆ ಹಸುಗಳನ್ನು (Cow) ಬಚ್ಚಿಟ್ಟು ಸಾಗಿಸುತ್ತಿದ್ದ ವಾಹನ ಅಪಘಾತವಾಗಿರುವ (Accident) ಘಟನೆ ಚಾಮರಾಜನಗರ (Chamarajanagarತಾಲೂಕಿನ ಪುಣ್ಯದ ಹುಂಡಿ ಬಳಿ ನಡೆದಿದೆ.
ಗೂಡ್ಸ್ ವಾಹನದಲ್ಲಿ ಒಟ್ಟು 11 ಹಸುಗಳನ್ನು ಸಾಗಿಸಲಾಗುತ್ತಿದ್ದು, ಅದರಲ್ಲಿ 1 ಹಸು ಅಪಘಾತದಲ್ಲಿ ಸಾವನ್ನಪ್ಪಿದೆ. ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಶಂಕೆ ಮೂಡಿದೆ. ಸದ್ಯ ಉಳಿದ 10 ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ಇಂದು ಮುಂಜಾನೆ 5:30ರ ವೇಳೆಗೆ ಅಪಘಾತ ಸಂಭವಿಸಿದೆ. ಚಾಲಕ 11 ರಾಸುಗಳನ್ನು ವಾಹನದಲ್ಲಿ ತುಂಬಿ, ಹಿಂಭಾಗದಲ್ಲಿ ಟೊಮೆಟೋ ಕ್ರೇಟ್ಗಳನ್ನು ಜೋಡಿಸಿದ್ದ. ವಾಹನದ ಹಿಂಭಾಗ ನೋಡಿದರೆ ಟೊಮೆಟೋ ಲೋಡ್ನಂತೆ ಕಾಣುವ ಹಾಗೆ ಬಿಂಬಿಸಿದ್ದಾನೆ. ಇದನ್ನೂ ಓದಿ: ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ 2 ದಿನ ವರುಣಾರ್ಭಟ – ಯೆಲ್ಲೋ ಅಲರ್ಟ್ ಘೋಷಣೆ
ನಿದ್ದೆಯ ಮಂಪರಿನಲ್ಲಿ ಅತಿ ವೇಗವಾಗಿ ಬರುತ್ತಿದ್ದ ವಾಹನ ತಿರುವು ನೋಡದೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೆ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಆಗುತ್ತಾ?
Web Stories