– ಕೇರಳ ಮಾದರಿಯಲ್ಲಿ ಯುವಕರಿಗೆ ಟಿಕೆಟ್
ಲಕ್ನೋ: ಮುಂದಿನ ವರ್ಷ ಆರಂಭದಲ್ಲಿ ಬರಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗುತ್ತಿದ್ದು, ನಾಲ್ಕು ತಿಂಗಳ ಮೊದಲೇ ತಾಲೀಮು ಆರಂಭಿಸಿದೆ. ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಜ್ಜಾಗುತ್ತಿದ್ದು, ಇಡೀ ಉತ್ತರ ಪ್ರದೇಶದಲ್ಲಿ ಬೃಹತ್ ಹೊರ್ಡಿಂಗ್ಗಳನ್ನು ಹಾಕಲು ಶುರು ಮಾಡಿದೆ.
ಪ್ರಿಯಾಂಕಾ ಗಾಂಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ನೇರವಾಗಿ ಘೋಷಣೆ ಮಾಡದ ಕಾಂಗ್ರೆಸ್, ಪೋಸ್ಟರ್ ಗಳಲ್ಲಿ ದೊಡ್ಡ ಭಾವ ಚಿತ್ರಗಳನ್ನು ಬಳಸುವ ಮೂಲಕ ಪರೋಕ್ಷವಾಗಿ ಭವಿಷ್ಯದ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ: ತಾಲಿಬಾನ್ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು
ಪ್ರಮುಖ ನಗರಗಳಲ್ಲಿ ಹಾಕುತ್ತಿರುವ ಫ್ಲೆಕ್ಸ್ಗಳಲ್ಲಿ ಪ್ರಿಯಾಂಕಾ ಗಾಂಧಿ ಫೋಟೋ ಹಾಕಿ, ಪರಿವರ್ತನ್ ಕಾ ಸಂಕಲ್ಪ್, ಕಾಂಗ್ರೆಸ್ ಹೈ ವಿಕಲ್ಪ್’ (ಪರಿವರ್ತನೆಯ ಸಂಕಲ್ಪ, ಕಾಂಗ್ರೆಸ್ ಮಾತ್ರ ಪರ್ಯಾಯ) ಎಂಬ ಸಾಲುಗಳನ್ನು ರಾಜ್ಯ ಕಾಂಗ್ರೆಸ್ ಸಮಿತಿ ಉಲ್ಲೇಖಿಸಿದೆ. ಇನ್ನೂ ಕೆಲವು ಕಡೆ ‘ಯುಪಿ ಮೇ ಆ ರಾಹಿ ಹೈ ಕಾಂಗ್ರೆಸ್’ ನಂತಹ ಘೋಷವಾಕ್ಯಗಳೊಂದಿಗೆ ಪ್ರಿಯಾಂಕಾ ಮುಖವನ್ನು ಕೇಂದ್ರೀಕರಿಸಲಾಗಿದೆ.
ರಾಜ್ಯ ಸಮಿತಿ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರಗಳನ್ನು ಚಿಕ್ಕದಾಗಿ ಬಳಕೆ ಮಾಡಿದ್ದು, ಎಲ್ಲ ನಾಯಕರ ಪಟ್ಟಿಯಲ್ಲಿ ಅವರನ್ನು ಸೇರಿಸಲಾಗಿದೆ. ಭಿನ್ನವಾಗಿ ಪ್ರದರ್ಶಿಸುವ ಗೋಜಿಗೆ ಹೋಗಿಲ್ಲ. ಸಂಪೂರ್ಣ ಚಿತ್ತ ಪ್ರಿಯಾಂಕಾ ಗಾಂಧಿ ಮೇಲೆಯೇ ಇದ್ದು, ಯುಪಿಯಲ್ಲಿ ಕಾಂಗ್ರೆಸ್ ಪ್ರಿಯಾಂಕಾರನ್ನೇ ನಂಬಿಸಿಕೊಂಡಿರುವುದು ಸ್ಪಷ್ಟವಾಗಿದೆ. ಇದನ್ನೂ ಓದಿ: ಕುರ್ಚಿಗಾಗಿ ಹಗಲುಗನಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ: ಶ್ರೀರಾಮುಲು
ಉತ್ತರ ಪ್ರದೇಶದಲ್ಲಿ ಕೇರಳ ಮಾದರಿ
ಉತ್ತರ ಪ್ರದೇಶದಲ್ಲಿ ಕೇರಳ ಮಾದರಿಯಲ್ಲಿ ಚುನಾವಣೆ ನಡೆಸಲು ಚಿಂತನೆ ನಡೆದಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಯುವಕರಿಗೆ ಟಿಕೆಟ್ ನೀಡುವ ಚಿಂತನೆಯಲ್ಲಿದ್ದು, ಇನ್ನಷ್ಟೇ ಈ ಬಗ್ಗೆ ಮತ್ತಷ್ಟು ಮಾಹಿತಿಗಳು ಬರಬೇಕಿದೆ.
ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ಯುವಕರಿಗೆ ಟಿಕೇಟ್ ನೀಡಿತ್ತು. ಬಹುತೇಕ ಅಭ್ಯರ್ಥಿಗಳು 50 ವರ್ಷದೊಳಗಿನ ವ್ಯಕ್ತಿಗಳಾಗಿದ್ದರು. ಇದು ಕೇರಳದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಟಿ ಮಾಡಿತ್ತು. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದಲ್ಲೂ ಈ ಬಾರಿ ಯುವಕರಿಗೆ ಮಾನ್ಯತೆ ಸಿಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.