ಹೈದರಾಬಾದ್: ಮದುವೆ ಸಮಾರಂಭದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ ದುರ್ಘಟನೆಯೊಂದು ತೆಲಂಗಾಣದ ನಾಗೋಲಿಯಲ್ಲಿ ನಡೆದಿದೆ.
4 ವರ್ಷದ ಜಿತೇಂದ್ರ ಕುಮಾರ್ ಹಾಗೂ 5 ವರ್ಷದ ಮನಸ್ವಿನಿ ಮೃತ ದುರ್ದೈವಿಗಳು. ಬುಧವಾರದಂದು ಇಲ್ಲಿನ ಕೃಷ್ಣ ಜಿಲ್ಲೆಯ ನಂದಿಗಾಮದ ಮುನಗಚೆರ್ಲಾ ಗ್ರಾಮದವಾರದ ಶಿವಾಜಿ ಸಂಬಂಧಿಕರೊಬ್ಬರ ಮದುವೆ ಸಮಾರಂಭಕ್ಕಾಗಿ ನಾಗೋಲಿಯ ಶುಭಂ ಕನ್ವೆಂಷನ್ ಹಾಲ್ಗೆ ಬಂದಿದ್ದರು. ಮಗ ಜಿತೇಂದ್ರ ಹಾಗೂ ಅಣ್ಣನ ಮಗಳಾದ ಮನಸ್ವಿನಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು.
ಮದುವೆ ಮಂಟಪದಲ್ಲಿ ಆಡವಾಡುವ ವೇಳೆ ಜಿತೇಂದ್ರ ಹಾಗೂ ಮನಸ್ವಿನಿ ಫೌಂಟೇನ್(ನೀರಿನ ಚಿಲುಮೆ)ಯೊಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ನೀರಲ್ಲಿ ಕೊಚ್ಚಿ ಹೋಗ್ತಿದ್ದ ನಾಯಿ ರಕ್ಷಣೆ- ವಿಡಿಯೋ ವೈರಲ್ https://t.co/5Z5cblskDs#Kalaburagi #Dog #Rescue #Video pic.twitter.com/QP9uGK0VZn
— PublicTV (@publictvnews) October 6, 2017
1 ವರ್ಷ ತುಂಬದ ಪುಟ್ಟ ಮಗು ಕಣ್ಮರೆ: ಕಿಡ್ನ್ಯಾಪ್ ಶಂಕೆ https://t.co/w0MDz17YwP #Child #Missing #Bengaluru pic.twitter.com/9rTQZ2tQ4Z
— PublicTV (@publictvnews) October 6, 2017