ಚೆನ್ನೈ: ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಟಿವಿಕೆ ಸದಸ್ಯನ ಹತ್ಯೆ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 5 ರ ರಾತ್ರಿ ಚೆನ್ನೈನಲ್ಲಿ (Chennai) ಕ್ರಿಮಿನಲ್ ಹಿನ್ನೆಲೆಯ ತಮಿಳಗ ವೆಟ್ರಿ ಕಳಗಂ (TVK) ಸದಸ್ಯ ಕಣ್ಣನ್ ಎಂಬಾತನನ್ನು ಗುಂಪೊಂದು ಇರಿದು ಕೊಂದಿತ್ತು. ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Guwahati Murder | ಪತ್ನಿ ಕೊಂದು ಬೆರಳುಗಳು ಪೀಸ್ ಪೀಸ್ – ರುಂಡ ಕತ್ತರಿಸಿ ಫ್ರಿಜ್ನಲ್ಲಿಟ್ಟಿದ್ದ ಪತಿ!
ಕಣ್ಣನ್ ಕಾರು ಬಾಡಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಕಣ್ಣನ್ ತನ್ನ ಸ್ನೇಹಿತರೊಂದಿಗೆ ಇದ್ದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಗುಂಪೊಂದು ಆತನ ಮೇಲೆ ದಾಳಿ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರಲ್ಲಿ ಒಬ್ಬ ಕಣ್ಣನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡಿದ್ದ ಕಣ್ಣನ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಶಾಸ್ತ್ರಿನಗರ ಪೊಲೀಸರು ವಿಶೇಷ ತಂಡವನ್ನು ರಚಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಬರಣಿ, ರಾಕೇಶ್, ನರೇಶ್, ಮಣಿಕಂದನ್ ಮತ್ತು ಹರಿಹರನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ರೆ ಹುಷಾರ್ – ತ್ರಿಷಾ ಟೀಕಿಸಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ವಿಜಯ್
ತನಿಖೆಯಲ್ಲಿ ಕಣ್ಣನ್ ಮತ್ತು ಅವನ ಸಹಚರರು 2009 ರಲ್ಲಿ ಬರಾನಿಯ ಚಿಕ್ಕಪ್ಪ ಶಿವನನ್ನು ಕೊಲೆ ಮಾಡಿದ್ದರು ಎಂದು ತಿಳಿದುಬಂದಿದೆ. ಬರಾನಿಯ ತಂದೆ ವೇಲು ಅವರನ್ನು 2014 ರಲ್ಲಿ ಕೊಲೆ ಮಾಡಲಾಗಿತ್ತು. ಹಿಂದಿನ ಕೊಲೆಗಳಿಗೆ ಸೇಡು ತೀರಿಸಿಕೊಳ್ಳಲು ಕಣ್ಣನ್ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
