ಕೊಪ್ಪಳ: ಕೋತಿಗಳ ಜೊತೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಲ ಕಳೆದು, ಬಾಳೆಹಣ್ಣು ತಿನ್ನಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀರಾಮುಲು ಅವರು ಕೋತಿಗಳ ಜೊತೆಗೆ ಕೆಲವು ಸಮಯ ಕಳೆದಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಘಟನೆ ನಡೆದಿದೆ. ರಾಮಾಯಣದಲ್ಲಿ ಉಲ್ಲೇಖ ಇರುವ ಪೌರಾಣಿಕ ಪ್ರಸಿದ್ಧ ಪಂಪಾ ಸರೋವರ ಇದಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಳೆ ಅವಾಂತರ- ಹೂ ತೋಟಗಳು ಜಲಾವೃತ
ವೀಡಿಯೋದಲ್ಲಿ ಏನಿದೆ?
ಮಂಗಗಳಿಗೆ ಆಹಾರ ನೀಡುತ್ತಿರುವ ಸಚಿವ ಬಿ.ಶ್ರೀರಾಮುಲು ಅವರನ್ನು ನೋಡಬಹುದಾಗಿದೆ. ಅವರ ಹೆಗಲ ಮೇಲೆ ಕೋತಿ ಕುಳಿತುಕೊಂಡಿದೆ. ಅವರು ಕೋತಿಗಳಿಗೆ ಬಾಳೆ ಹಣ್ಣು ನೀಡುವಾಗ ಹೆಗಲೆ ಮೇಲೆ ಕೋತಿ ಕುಳಿತುಕೊಂಡಿದೆ. ಕೋತಿಯನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡೇ ಇತರೆ ಕೋತಿಗಳಿಗೆ ಆಹಾರವನ್ನು ಶ್ರೀರಾಮುಲು ನೀಡಿದ್ದಾರೆ. ಇದನ್ನೂ ಓದಿ: 75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ