ಚಾಮರಾಜನಗರ: ಕಾವೇರಿ ಹೋರಾಟದ (Cauvery Protest) ಭಾಗವಾಗಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘ (Tamil Organisation) ಬೆಂಬಲ ಘೋಷಿಸಿದೆ.
ಕರ್ನಾಟಕ ಬಂದ್ ಸಂಬಂಧ ಚಾಮರಾಜನಗರದ (Chamarajanagar) ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪೂರ್ವಭಾವಿ ಸಭೆ ನಡೆಸಿದ್ದಾರೆ. ಇದನ್ನೂ ಓದಿ: World Cup 2023: ಇನ್ನೂ ವೀಸಾ ಸಿಕ್ಕಿಲ್ಲ – ಪಾಕಿಸ್ತಾನ ಆಟಗಾರರಿಗೆ ಶುರುವಾಯ್ತು ಹೊಸ ಸಮಸ್ಯೆ
- Advertisement 2
- Advertisement 3
ಸಭೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘದ ಕಾರ್ಯದರ್ಶಿ ಜಗದೀಶನ್ ಮಾತನಾಡಿ, ಕರ್ನಾಟಕದಲ್ಲಿ 19 ತಮಿಳು ಸಂಘಟನೆಗಳಿವೆ. ನಾವೆಲ್ಲರೂ ಕನ್ನಡಿಗರೇ ಆಗಿದ್ದೇವೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಒಂದು ತೊಟ್ಟು ನೀರನ್ನು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ಕಾವೇರಿ ವಿಚಾರದಲ್ಲಿ ಯಾವತ್ತೂ ತಮಿಳುನಾಡಿನ ವಿರುದ್ಧ ದಿಕ್ಕಾರ ಕೂಗ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಸ್ತೆಗಿಳಿಯಲ್ಲ BMTC, KSRTC; ಶಾಲಾ- ಕಾಲೇಜುಗಳಿಗೂ ರಜೆ: ಮಂಗಳವಾರ ಏನಿರತ್ತೆ..?, ಏನಿರಲ್ಲ..?
- Advertisement 4
ನಮ್ಮ ಮನಸ್ಸು ಯಾವತ್ತಿಗೂ ಕರ್ನಾಟಕದ ಪರವೇ ಇರುತ್ತೆ. ನಾವು ಕರ್ನಾಟಕದ ಪರ ಇರ್ತೀವಿ, ಕರ್ನಾಟಕದ ನೆಲ-ಜಲ ಬಳಸಿಕೊಂಡು ಜೀವಿಸುತ್ತಾ ಇದ್ದೇವೆ, ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Web Stories