ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆ ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇಂದು ಮಧ್ಯಾಹ್ನ 1:40 ರ ಸುಮಾರಿಗೆ ವಿಜಯ್ (CM Vijay) ಮಂಗಳೂರು ಏರ್ಪೋರ್ಟ್ಗೆ (Mangaluru Airport) ಆಗಮಿಸಿದರು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಅಭಿಮಾನಗಳು ಶಿಳ್ಳೆಚಪ್ಪಾಳೆಯ ಮಳೆಗರೆದರು. ದಳಪತಿ ವಿಜಯ್ ಕೂಡ ಒಮ್ಮೆ ಅಭಿಮಾನಿಗಳತ್ತ ಕೈಬಿಸಿ ನಗುಮುಖದಿಂದ ಉಡುಪಿಯತ್ತ ಹೊರಟರು.
ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ ….




