ಕಲಬುರಗಿ: ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏನ್ ಸರ್ ನಿಂಬೆಹಣ್ಣು ಅಂತ ಕೇಳಿದ್ದಕ್ಕೆ, ಪತ್ರಕರ್ತರೊಬ್ಬರಿಗೆ ಕೈಯಲ್ಲಿದ್ದ ನಿಂಬೆಹಣ್ಣನ್ನು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಸಿದ್ದರಾಮಯ್ಯ ಅವರು ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡಿದ್ದರು. ಇದನ್ನು ನೋಡಿ ಪರ್ತಕರ್ತರು, ಏನ್ ಸರ್ ಕೈಯಲ್ಲಿ ನಿಂಬೆಹಣ್ಣು ಎಂದು ಪ್ರಶ್ನಿಸಿದಾಗ, ವಿಮಾನ ನಿಲ್ದಾಣದಲ್ಲಿ ಯಾರೋ ಕೊಟ್ರು. ಹಿಡ್ಕೊಂಡಿದ್ದೆ ಅಷ್ಟೇ. ಇದ್ರಲ್ಲಿ ನಂಗೆ ನಂಬಿಕೆಯಿಲ್ಲ. ನಿಂಗೆ ಒಳ್ಳೆಯದಾದರೆ ಆಗ್ಲಿ ಅಂತ ಹೇಳಿ ಪಕ್ಕದಲ್ಲಿದ್ದ ಪತ್ರಕರ್ತರ ಜೇಬಿಗೆ ನಿಂಬೆಹಣ್ಣು ಹಾಕಿದ್ದಾರೆ.
ಜಿಲ್ಲೆಯಲ್ಲಿ ಕುರುಬ ಮತಗಳನ್ನ ಸೆಳೆಯಲು ಕೈ ಪಡೆ ರಣತಂತ್ರ ಮಾಡಿದ್ದು, ಕಲಬುರಗಿ ಕ್ಷೇತ್ರದ ಅಫಜಲಪುರ ಜೇವರ್ಗಿಯಲ್ಲಿ ಸಿದ್ದರಾಮಯ್ಯ ಇಂದು ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.