ಸ್ಯಾಂಡಲ್ವುಡ್ ನಟ ದ್ವಾರಕೀಶ್ (Actor Dwarakish) ನಿಧನ ಅವರ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಸುಮಾರು ವರ್ಷಗಳಿಂದ ಅವರು ಮಾತನಾಡದೇ ಇರುವ ಮಾತುಗಳನ್ನು ಹೇಳಿದ್ದಾರೆ. ಅವರ ಅಗಲಿಕೆಯಿಂದ ಶಾಕ್ ಆಗಿದೆ ಎಂದು ಪತ್ನಿ ಶೈಲಜಾ (Shailaja) ಮಾತನಾಡಿದ್ದಾರೆ.
ದ್ವಾರಕೀಶ್ ಅವರನ್ನು ನಮ್ಮ ಕುಟುಂಬದವರು ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ. ಯುಗಾದಿ ಹಬ್ಬಕ್ಕೆ ಊರಿಗೆ ಹೋಗ್ತಿದ್ದೆ, ಆದರೆ ಅವರಿಗೆ ಕಳುಹಿಸೋಕೆ ಮನಸ್ಸು ಇರಲಿಲ್ಲ. ಅಂದು ಸುಮಾರು ವರ್ಷಗಳಿಂದ ಅವರು ಮಾತಾಡದೇ ಇರುವ ಮಾತುಗಳನ್ನಾಡಿದ್ದರು. ಅದೇ ನನಗೆ ಇವತ್ತು ಶಾಕ್ ಆಗ್ತಿದೆ. ನನ್ನನ್ನು ಪ್ರೀತಿಯಿಂದ ಪುಟ್ಟ ಅಂತ ಕರೆಯುತ್ತಿದ್ದರು ಎಂದು ಶೈಲಜಾ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಗುಂಮ್ಟಿ’ ಸಿನಿಮಾಗೆ ಹೀರೋನೇ ನಿರ್ದೇಶಕ
ಅಂಬುಜಾ ಅಕ್ಕ ಮತ್ತು ಅವರ ಮಕ್ಕಳು ನನ್ನ ಯಾವತ್ತೂ ಬೇರೆಯವರ ಥರ ನೋಡ್ಲಿಲ್ಲ. ಅವರಿಗೆ ನಾನು ಚಿರಋಣಿ ಎಂದು ಮಾತನಾಡಿದ್ದಾರೆ. ಪ್ರತಿದಿನ ಬೆಳಗ್ಗೆ 11 ಗಂಟೆಗೆ ಏಳ್ತಿದ್ದವ್ರು ಇವತ್ತು 7 ಗಂಟೆಗೆ ಎದ್ದಿದ್ದೇ ಸೋಜಿಗ. ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿನಿ ಎಂದು ಪತ್ನಿ ಮಾತನಾಡಿದ್ದಾರೆ.
ಹಿರಿಯ ನಟ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಾಳೆ (ಏ.17) ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಏಳು ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.