ಧಾರವಾಡ: ಸರೋಜಿನಿ ಮಹಿಷಿ ವರದಿ ಜಾರಿಯಾಗದ ಹಿನ್ನೆಲೆಯಲ್ಲಿ ಮಹಿಷಿ ಸಹೋದರಿ ಸಾವಿತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂದು ನನ್ನ ಸಹೋದರಿ ವರದಿ ನೀಡಿದ್ದರು. ಆದರೆ ಅದು ಇಂದು ಜಾರಿಯಾಗದೇ ಇರುವುದು ಬೇಸರ ತಂದಿದೆ ಎಂದು ಸರೋಜಿನಿ ಮಹಿಷಿ ಸಹೋದರಿ ಸಾವಿತ್ರಿ ಹೇಳಿದ್ದಾರೆ.
ಈ ವರದಿ ಜಾರಿಗೆ ಅವರು ಸಾಕಷ್ಟು ಅಭ್ಯಾಸ ಮಾಡಿ ವರದಿ ತಯಾರಿಸಿದ್ದರು. ಆದರೆ ಸರ್ಕಾರ ಅದನ್ನು ಯಾಕೆ ಜಾರಿಗೆ ತರುತ್ತಿಲ್ಲ ಎನ್ನುವುದು ಬೇಸರವಾಗಿದೆ. ವರದಿ ಜಾರಿಗೆ ತರುವುದು ಮನಸ್ಸು ಮಾಡಿದರೆ ದೊಡ್ಡ ಮಾತಲ್ಲ ಎಂದರು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದು ವರದಿಯಲ್ಲಿದೆ. ಬೇರೆ ರಾಜ್ಯದಲ್ಲಿ ನಮ್ಮವರಿಗೆ ಕೆಲಸ ಸಿಗಲ್ಲ, ಅದಕ್ಕಾಗಿ ಅವರು ಈ ವರದಿ ತಯಾರಿಸಿ ಕೊಟ್ಟಿದ್ದರು. ಆದರೆ 3 ವರ್ಷಗಳಲ್ಲಿ ಅವರು ರಾಜ್ಯದ ತುಂಬೆಲ್ಲ ಓಡಾಡಿ ವರದಿ ತಯಾರಿಸಿದ್ದರು. ಬೇರೆ ರಾಜ್ಯದ ಜನರು ರಾಜ್ಯಕ್ಕೆ ಬಂದಾಗ ಅವರಿಗೆ ಇಲ್ಲಿ ಕೆಲಸ ಸಿಗುತ್ತಿದೆ ಎನ್ನುವ ಕಳವಳ ಅವರು ವ್ಯಕ್ತಪಡಿಸಿದ್ದರು ಎಂದು ಸಾವಿತ್ರಿ ಹೇಳಿದರು.
ಎಲ್ಲ ಕಡೆ ಪ್ರಾದೇಶಿಕ ಅಸಮಾನಾತೆ ಇರುವ ಕಾರಣ ಸರೋಜಿನಿ ಅವರು ಈ ವರದಿ ಕೊಟ್ಟಿದ್ದರು, ಹೀಗಿನ ಸರ್ಕಾರವಾದರೂ ಮಾಡಬೇಕು. ಏಕೆಂದರೆ ಸರ್ಕಾರಕ್ಕೆ ಆ ಶಕ್ತಿ ಇದೆ ಎಂದು ಸಾವಿತ್ರಿ ಹೇಳಿದರು. ನಮ್ಮ ಅಕ್ಕಳಿಗೆ ಕನ್ನಡಿಗರ ಬಗ್ಗೆ ಬಹಳ ಕಳಕಳೀ ಇತ್ತು ಎಂದು ಅವರು ಹೇಳಿದರು.