ಬೆಂಗಳೂರು: ಬಿಬಿಎಂಪಿ ಆವರಣದಲ್ಲಿ ಇಡಲು ನಿರ್ಮಾಣವಾಗುತ್ತಿರುವ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಗೆ ಮುತ್ತಿಟ್ಟು ನಟ ರಾಘವೇಂದ್ರ ರಾಜ್ ಕುಮಾರ್ ಅವರು ಭಾವುಕರಾದರು.
ಅಪ್ಪು ಪುತ್ಥಳಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಬನಶಂಕರಿಯಲ್ಲಿರುವ ಸಪ್ತತಿ ಕ್ರಿಯೇಷನ್ ನಾ ಶಿವದತ್ತ ಅವರು ಈ ಪುತ್ಥಳಿ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಪುತ್ಥಳಿಯನ್ನು ವೀಕ್ಷಿಸಲು ಬಂದ ರಾಘಣ್ಣ ಭಾವುಕರಾದ್ರು. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್ಗೆ ಬ್ರೇಕ್ ಹಾಕಿದ ಪ್ರಿಯಾಂಕ ಚೋಪ್ರಾ
ಡಾ.ರಾಜ್ ಪುತ್ಥಳಿಯನ್ನು ಕೂಡ ಶಿವದತ್ತ್ ನಿರ್ಮಿಸಿದ್ದು ಆಗ ರಾಘವೇಂದ್ರ ರಾಜ್ ಕುಮಾರ್ ಇದೇ ಸ್ಥಳಕ್ಕೆ ಬಂದಿದ್ರು. ಈಗ ತಮ್ಮನ ಪುತ್ಥಳಿಯನ್ನು ನೋಡೋದಕ್ಕೆ ಬರುವಂತಾಯ್ತು ಅಂತ ರಾಘಣ್ಣ ಭಾವುಕರಾದ್ರು. ಜೊತೆಗೆ ಪುತ್ಥಳಿಯಲ್ಲಿ ಸಣ್ಣ ಬದಲಾವಣೆಯ ಬಗ್ಗೆಯೂ ಕಲಾವಿದರಿಗೆ ತಿಳಿಸಿ ಅಪ್ಪು ಪುತ್ಥಳಿಗೊಂದು ಸಿಹಿಮುತ್ತನ್ನು ಕೊಟ್ಟು ಗಲ್ಲಹಿಡಿದು ಭಾವುಕರಾದ್ರು.
ಅಪ್ಪು ತರಾತುರಿಯಲ್ಲಿ ಹೋಗಿಬಿಟ್ಟರು. ಆದ್ರೇ ಅವ್ರ ಪುತ್ಹಳಿ ನಿರ್ಮಾಣಕ್ಕೆ ತರಾತುರಿ ಬೇಡ. ಚೊಕ್ಕವಾಗಿ ನಿಧಾನವಾಗಿ ಮಾಡಿ ಅಂತಾ ಕಲಾವಿದರಿಗೆ ಹೇಳಿದ್ರು. ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಈ ಪುತ್ಥಳಿಯ ನಿರ್ಮಾಣ ಕಾರ್ಯದ ಪರಿಶೀಲನೆಯಲ್ಲಿ ಸಾಥ್ ಕೊಟ್ರು. ಇದನ್ನೂ ಓದಿ: ದುನಿಯಾ ವಿಜಯ್ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ – ಯುವತಿ ಪಟ್ಟು