ಸಿಸಿಟಿವಿ ಪುಡಿ ಮಾಡಿ ದೇವಸ್ಥಾನ ಒಳಗಡೆ ನುಗ್ಗಿ ದೇವಿ ವಿಗ್ರಹ, ಆಭರಣ ಕಳ್ಳತನ

Public TV
0 Min Read
Mangalore theft2

ಮಂಗಳೂರು: ದೇವಸ್ಥಾನಕ್ಕೆ ನುಗ್ಗಿ ದೇವಿ ವಿಗ್ರಹ ಮತ್ತು ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯದ ಮರಕತ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಕಳ್ಳರು ದೇವಿಯ ಪ್ರಾಚೀನ ವಿಗ್ರಹ, ಪ್ರಭಾವಳಿ ಮತ್ತು ಆಭರಣವನ್ನು ದೋಚಿದ್ದಾರೆ. ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಪುಡಿಗೈದು ಕೃತ್ಯ ಎಸಗಿದ್ದಾರೆ.

ಸುಮಾರು 10 ಲಕ್ಷ ರೂ. ಅಧಿಕ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangalore theft

Share This Article
Leave a Comment

Leave a Reply

Your email address will not be published. Required fields are marked *