ತೆಲುಗಿನ ಖ್ಯಾತ ನಟ ನರೇಶ್ (Naresh) ಮತ್ತು ಬೆಂಗಳೂರಿನ ರಮ್ಯಾ ದಾಂಪತ್ಯ ಜೀವನದ ರಾದ್ಧಾಂತ ಸ್ವಲ್ಪ ತಿಂಗಳ ಮಟ್ಟಿಗೆ ತಣ್ಣಗಾಗಿತ್ತು. ಬೆಂಗಳೂರಿನಲ್ಲಿ ಇಬ್ಬರೂ ಮಾಡಿದ ಆರೋಪ ಪ್ರತ್ಯಾರೋಪದ ನಂತರ ನರೇಶ್ ಮತ್ತು ಪವಿತ್ರಾ ಲೋಕೇಶ್ ಮೈಸೂರಿನ ಲಾಡ್ಜ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲಿಂದ ಪ್ರಕರಣಕ್ಕೆ ಬೇರೆ ತಿರುವು ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ನರೇಶ್ ಮತ್ತು ಪವಿತ್ರಾ ಲೋಕೇಶ್ ಹೈದರಾಬಾದ್ಗೆ (Hyderabad) ಶಿಫ್ಟ್ ಆದರು.
ಇತ್ತ ರಮ್ಯಾ (Ramya) ಅವರ ತಾಯಿಗೆ ಹುಷಾರಿಲ್ಲದ ಕಾರಣಕ್ಕಾಗಿ ಮತ್ತು ನರೇಶ್ ಈ ಎಲ್ಲ ಪ್ರಕರಣವನ್ನು ಕೋರ್ಟಿನಲ್ಲೇ ನೋಡಿಕೊಳ್ಳುತ್ತೇನೆ ಎಂದು ಪರಿಣಾಮ ಇಡೀ ಪ್ರಕರಣ ಕೆಲವು ತಿಂಗಳ ಮಟ್ಟಿಗೆ ತಣ್ಣಗಾಗಿತ್ತು. ಇಬ್ಬರೂ ತಮ್ಮ ಪಾಡಿಗೆ ತಾವು ಇದ್ದುಕೊಂಡು ಕೋರ್ಟ್ ನಲ್ಲಿ ಫೈಟ್ ಮಾಡುತ್ತಾರೆ ಎಂದುಕೊಳ್ಳುವಷ್ಟರಲ್ಲಿ ದಿಢೀರ್ ಅಂತ ನರೇಶ್ ಮನೆಯಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಆಗಿದೆಲ್ಲ ಸರಿ ಮಾಡಿ, ಗಂಡನ ಜೊತೆಯೇ ಇರುವುದಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್ಗೆ ಟೆನ್ಷನ್ ಶುರು
ಇತ್ತ ಪವಿತ್ರಾ ಲೋಕೇಶ್ (Pavithra Lokesh) ಜೊತೆ ತೋಟದ ಮನೆಯಲ್ಲಿ ನರೇಶ್ ಇದ್ದಾರೆ ಎಂದು ಹೇಳಲಾಗುತ್ತಿದೆ. ರಮ್ಯಾ ಮನೆಗೆ ಬಂದ ಹಿನ್ನೆಲೆಯಲ್ಲಿ ನರೇಶ್ ಗೊಂದಲಕ್ಕೀಡಾಗಿದ್ದಾರೆ. ಅಲ್ಲದೇ, ಪವಿತ್ರಾ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ರಮ್ಯಾ ತಾಕೀತು ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮತ್ತೆ ಗಂಡನ ಜೊತೆ ಬದುಕು ಮಾಡುತ್ತೇನೆ ಎಂದು ನರೇಶ್ ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನುವುದು ಸದ್ಯಕ್ಕಿರುವ ವರ್ತಮಾನ. ರಮ್ಯಾ ವಾಪಸ್ಸು ಮನೆಗೆ ಬರುತ್ತಿದ್ದಂತೆಯೇ ಪವಿತ್ರಾ ಕೂಡ ಗಲಿಬಿಲಿಗೊಂಡಿದ್ದಾರಂತೆ.