ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನ್ಯಾಷನಲ್ ಕ್ರಶ್ ಆಗಿ ಸೌತ್ ಮತ್ತು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಪಡ್ಡೆಹುಡುಗರ ಕನಸಿನ ರಾಣಿ ಶ್ರೀವಲ್ಲಿಯಾಗಿ (Srivalli) ದಿಲ್ ಕದ್ದಿದ್ದಾರೆ. ಅದೃಷ್ಟದಿಂದ ಸಿನಿಮಾ ಚಾನ್ಸ್ ಸಿಕ್ಕಿದೆ. ಟ್ಯಾಲೆಂಟ್ನಿಂದ ಅಲ್ಲ ಎನ್ನುವವರಿಗೆ ಇದೀಗ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ತಕ್ಕ ಉತ್ತರ ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಸಕ್ಸಸ್ ನೋಡಿ ಆಕೆ ಅದೃಷ್ಟದಿಂದ ಎಲ್ಲಾ ಬಹುಭಾಷೆಗಳಲ್ಲಿ ಕ್ರೇಜ್ ಸಂಪಾದಿಸಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡುವವರಿಗೆ ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನನಗಿಂತ ಸುಂದರವಾಗಿರುವವರು, ಪ್ರತಿಭಾವಂತರು ಸಾಕಷ್ಟು ಜನ ಇದ್ದಾರೆ ಎನ್ನುವುದು ನನಗೆ ಗೊತ್ತು. ಆದರೆ ನನಗೆ ಸಿಕ್ಕ ಅವಕಾಶಗಳಿಂದ ನಾನು ಇವತ್ತು ಈ ಸ್ಥಾನದಲ್ಲಿ ನಿಂತಿದ್ದೀನಿ. ಅದಕ್ಕೆ ನಾನು ಕೃತಜ್ಞಳು. ಜೀವನದಲ್ಲಿ ಸಿಗುವ ಯಾವುದೇ ಸಂತೋಷ ಅಥವಾ ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಧಿಸುವ ಯಶಸ್ಸನ್ನು ಕೇವಲವಾಗಿ ಪರಿಗಣಿಸಬಾರದು. ಕಳೆದ ಕೆಲವು ವರ್ಷಗಳಿಂದ ನಾನು ಇದನ್ನು ಕಲಿತಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಜನ ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಬರುತ್ತಾರೆ. ನನ್ನನ್ನು ನೋಡಲು ಬರುವವರು ಥಿಯೇಟರ್ನಿಂದ ಹೊರಬರುವಾಗ ಸಂತೋಷ, ಹೆಮ್ಮೆ ಹೀಗೆ ಒಳ್ಳೆಯ ಅನುಭವದೊಂದಿಗೆ ಬರಬೇಕು. ನನ್ನ ಪ್ರೇಕ್ಷಕರಿಗೆ ಸಿನಿಮಾ ನಾಟಬೇಕು. ಆಗ ನನಗೆ ಸಮಾಧಾನ. ಮತ್ತೆ ಇಂತಹ ಮತ್ತಷ್ಟು ಸಿನಿಮಾ ಮಾಡಬೇಕು ಎನಿಸುತ್ತದೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಟಾಲಿವುಡ್ ನಟ ರಾಮ್ಚರಣ್ಗೆ ಗೌರವ ಡಾಕ್ಟರೇಟ್
‘ಕಿರಿಕ್ ಪಾರ್ಟಿ’ (Kirik Party) ನನ್ನ ಮೊದಲ ಸಿನಿಮಾದಿಂದಲೂ ಇದ್ದನ್ನೇ ಪಾಲಿಸಿಕೊಂಡು ಬಂದಿದ್ದೇನೆ. ಕಥೆಗಳ ಆಯ್ಕೆ ವಿಚಾರದಲ್ಲಿ ಕೆಲ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ನಟಿಸಲು ಸಾಕಷ್ಟು ಜನ ನಟಿಯರು ಕಾಯುತ್ತಿದ್ದಾರೆ. ಆ ಸಾಲಿನಲ್ಲಿ ನಾನು ಇದ್ದೀನಿ ಎಂದಿದ್ದಾರೆ. ರಾಜಮೌಳಿ ಡೈರೆಕ್ಷನ್ನಲ್ಲಿ ನಟಿಸುವ ಆಸೆ ತೊಡಿಕೊಂಡಿದ್ದಾರೆ.
ಅಲ್ಲು ಅರ್ಜುನ್ಗೆ ನಾಯಕಿಯಾಗಿ ನಟಿಸಿರುವ ‘ಪುಷ್ಪ 2’ (Pushpa 2) ಇದೇ ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅನಿಮಲ್ ಪಾರ್ಕ್, ದಿ ಗರ್ಲ್ಫ್ರೆಂಡ್, ರೈನ್ಬೋ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.