ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಕೆರಳಾಪುರ ಗ್ರಾಮದ ನಿವಾಸಿಯೊಬ್ಬರು ಸಹಾಯ ಕೇಳಿಕೊಂಡು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
2006ರಲ್ಲಿ ಮನೆ ಬಳಿ ಇದ್ದ ದೂರದ ಸಂಬಂಧಿಯೊಬ್ಬ ಮದುವೆ ಆಗುವುದಾಗಿ ನಂಬಿಸಿದ್ದಕ್ಕೆ ತನ್ನ ನೇತ್ರಾವತಿ ಸರ್ವಸ್ವ ನೀಡಿದ್ದಾರೆ. ಆದರೆ ಆಸಾಮಿ ಮೋಸ ಮಾಡಿದ್ದು ಬೇರೆ ಸ್ತ್ರೀಯನ್ನು ಮದುವೆಯಾಗಿ ನೇತ್ರಾವತಿ ಬಾಳನ್ನು ಹಾಳು ಮಾಡಿ ಗರ್ಭಿಣಿ ಮಾಡಿ ಮೋಸ ಮಾಡಿದ್ದಾನೆ.
ಮೋಸ ಮಾಡಿದ ಆಸಾಮಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ನೇತ್ರಾವತಿ ಕಳೆದ 12 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮರ್ಯಾದೆಗೆ ಅಂಜಿ ಹೊರಗೆ ಕೆಲಸಕ್ಕೆ ಹೋಗದೇ ಮನೆಯಲ್ಲಿ ಹೂ ಕಟ್ಟುವ ಕೆಲಸ ಮಾಡಿ ಜೀವನ ಮಾಡುತ್ತಿರುವ ಈ ದಿಟ್ಟ ಮಹಿಳೆ, ವಯಸ್ಸಾದ ಅಜ್ಜಿ ಮತ್ತು ಮಗನನ್ನು ಸಾಕುತ್ತಿದ್ದಾರೆ.
ಮಗನಿಗೆ 12 ವರ್ಷವಾಗಿದ್ದು 7ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ ಮಗನಿಗೆ ತಂದೆಯ ಹೆಸರು ಕೊಡಿಸಬೇಕು, ನನಗೆ ಹೋರಾಡಿ ಸಾಕಾಗಿ ಹೋಗಿದೆ ನನಗೆ ಸಹಾಯದ ಅವಶ್ಯಕತೆ ಇದೆ. ಮಗುವಿಗೆ ಯಾರು ಕಾರಣಕರ್ತ ಎನ್ನುವುದು ಡಿಎನ್ಎ ಪರೀಕ್ಷೆ ಮೂಲಕ ದೃಢಪಡಿಸಬೇಕು. ಇದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇದೆ. ನನ್ನ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸದ ಅವಶ್ಯಕತೆ ಇದೆ. ನನಗೂ ಜೀವನಕ್ಕಾಗಿ ಏನಾದ್ರೂ ಮಾಡಿಕೊಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.
https://www.youtube.com/watch?v=zZToT9X497Y
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews