ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಟೈಲರ್ನ ಭೀಕರ ಹತ್ಯೆಗೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉದಯಪುರದ ಘಟನೆ ನಡೆಯುತ್ತಿದ್ದಂತೆ ಹಲವೆಡೆ ಜನರು ಪ್ರತಿಭಟನೆಯನ್ನು ನಡೆಸುತ್ತಿದ್ದು, ಹಲವರು ಭಿನ್ನ ವಿಭಿನ್ನ ರೀತಿಯಲ್ಲಿ ಅಭಿಯಾನವನ್ನು ಮಾಡುತ್ತಿದ್ದಾರೆ. ಬಹುಭಾಷಾ ನಟಿ ಪ್ರಣಿತಾ ಸುಭಾಶ್ ಕೂಡಾ ಹಿಂದೂ ಲಿವ್ಸ್ ಮ್ಯಾಟರ್(ಹಿಂದೂ ಜೀವ ಮುಖ್ಯ) ಎಂದು ಬರೆದಿರುವ ಫಲಕ ಹಿಡಿದುಕೊಂಡು ಕೃತ್ಯವನ್ನು ಖಂಡಿಸಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ
Is anyone listening? pic.twitter.com/ecu4tjAfYD
— Pranitha Subhash (@pranitasubhash) June 29, 2022
ಇಸ್ ಎನಿವನ್ ಲಿಸನಿಂಗ್?(ಯಾರಾದರೂ ಕೇಳಿಸಿಕೊಳ್ಳುತ್ತಿದ್ದೀರಾ?) ಎಂಬ ಕ್ಯಾಪ್ಶನ್ನೊಂದಿಗೆ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಪ್ರಣಿತಾ ಅದರಲ್ಲಿ ಹಿಂದೂ ಲಿವ್ಸ್ ಮ್ಯಾಟರ್ ಎಂದು ಬರೆದಿರುವ ಫಲಕವನ್ನು ಹಿಡಿದಿದ್ದಾರೆ. ಈ ಮೂಲಕ ಮತಾಂಧತೆಗೆ ಹಿಂದೂ ಜೀವಗಳ ಬಲಿ ಕೊಡಬೇಡಿ ಎಂದು ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಉದಯಪುರ ಟೈಲರ್ ಹತ್ಯೆ ಖಂಡಿಸಿ ರಾಜ್ಯದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ
ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ನಂಜನಗೂಡಿನಲ್ಲೂ ಕೆಲ ವ್ಯಾಪಾರಿಗಳು ನನ್ನ ಕತ್ತು ಸೀಳಬೇಡಿ ಎಂದು ಬೋರ್ಡ್ ಹಿಡಿದುಕೊಂಡು ಅಭಿಯಾನ ಪ್ರಾರಂಭಿಸಿದ್ದಾರೆ. ನಾನು ಸತ್ಯ ಹೇಳಲ್ಲ. ಹೇಳಿದವರ ಪರ ನಿಲ್ಲುವುದೂ ಇಲ್ಲ. ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತನ್ನು ಸೀಳಬೇಡಿ ಎಂದು ಪೋಸ್ಟರ್ ಹಿಡಿದುಕೊಂಡು ಹಲವರು ಟೈಲರ್ ಹತ್ಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.