ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದ (Manipur Violence) ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 8 ಬಂದೂಕುಗಳು, 112 ಕಾಟ್ರಿಡ್ಜ್ಗಳು ಮತ್ತು 6 ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಬಿಷ್ಣುಪುರ್, ಚುರಾಚಂದ್ಪುರ, ತೆಂಗನೌಪಾಲ್, ಕಾಂಗ್ಪೋಕ್ಪಿ ಮತ್ತು ರಾಜಧಾನಿ ಇಂಫಾಲ್ ಪಶ್ಚಿಮ ಜಿಲ್ಲೆಗಳಿಂದ ಈ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ. ತೆಂಗ್ನೌಪಾಲ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ 6 ಬಂಕರ್ಗಳನ್ನ ಸಹ ನಾಶಪಡಿಸಲಾಗಿದೆ. ಇದನ್ನೂ ಓದಿ: ಹಿಮಾಚಲ, ಉತ್ತರಾಖಂಡದಲ್ಲಿ ಮಳೆಗೆ 81 ಸಾವು – ಪಂಜಾಬ್ನಲ್ಲಿ ಪ್ರವಾಹ ಪರಿಸ್ಥಿತಿ
- Advertisement 2
- Advertisement 3
ಇಂಫಾಲ್ ಜಿಲ್ಲೆಯ ಮಂತ್ರಪುಖ್ರಿ ಪ್ರದೇಶದಿಂದ ಒಪಿಯಾಡ್ ನೋವು ನಿವಾರಕ ಸಿರಪ್ನ 1,240 ಕೊಡೈನ್ ಫಾಸ್ಫೇಟ್ ಬಾಟಲಿಗಳೊಂದಿಗೆ ಅಸ್ಸಾಂ ಮೂಲದ ನಾಲ್ವರನ್ನ ಬಂಧಿಸಿದೆ ಎಂದು ನಾರ್ಕೋಟಿಕ್ಸ್ ಅಂಡ್ ಅಫೇರ್ಸ್ ಆಫ್ ಬಾರ್ಡರ್ (NAB) ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಳೆ ಅವಾಂತರಕ್ಕೆ ಹಿಮಾಚಲದಲ್ಲಿ 71 ಬಲಿ – 7.5 ಸಾವಿರ ಕೋಟಿ ನಷ್ಟ
- Advertisement 4
ಮಾರ್ಚ್ 3 ರಂದು ಮಣಿಪುರದಲ್ಲಿ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ ಆಯೋಜನೆ ಬಳಿಕ ಆರಂಭವಾದ ಘರ್ಷಣೆಯಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಚಾರ ಮಾಡಿದ್ದು ದೇಶಾದ್ಯಂತ ಟೀಕೆಗೆ ಕಾರಣವಾಗಿತ್ತು. ಇದೀಗ ಮಣಿಪುರ ಹಿಂಸಾಚಾರದ ಕುರಿತು ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳ (CBI) ದೇಶಾದ್ಯಂತ ತನ್ನ ಘಟಕಗಳಿಂದ 29 ಮಹಿಳಾ ಸಿಬ್ಬಂದಿ ಸೇರಿದಂತೆ 53 ಅಧಿಕಾರಿಗಳನ್ನ ನಿಯೋಜನೆ ಮಾಡಿದೆ.
Web Stories
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]