ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ (Northwest Karnataka Road) ಸಾರಿಗೆ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳ ಲಂಚಾವತಾರದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾದ 24 ಗಂಟೆಯೊಳಗೆ ಅಧಿಕಾರಗಳ ವಿರುದ್ಧ ಕ್ರಮವಾಗಿದ್ದು, ನೊಂದ ಅಭ್ಯರ್ಥಿಗಳು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ವಾಹನ ತರಬೇತಿ ಕೇಂದದಲ್ಲಿ ಉಚಿತ ವಾಹನ ತರಬೇತಿ ಪಡೆಯುತ್ತಿರುವ ಪರಿಶಿಷ್ಠ ಪಂಗಡ ಮತ್ತು ಪರಿಶಿಷ್ಠ ಜಾತಿ ಅಭ್ಯರ್ಥಿಗಳಿಂದ ತರಬೇತುದಾರರು, ಲೈಸನ್ಸ್ ಪರೀಕ್ಷೆಯ ನೆಪವೊಡ್ಡಿ ಲಂಚಪಡೆಯುತ್ತಿರುವ ಕುರಿತು ಸಾಕ್ಷಿ ಸಮೇತ ಪಬ್ಲಿಕ್ ಟಿವಿ ದನಿ ಎತ್ತಿತ್ತು. ಇದನ್ನೂ ಓದಿ: ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 4 & 5ನೇ ವರದಿ ಸಲ್ಲಿಕೆ – 3,630 ಶಿಫಾರಸು ಮಾಡಿದ ಆಯೋಗ
ಪಬ್ಲಿಕ್ ಟಿವಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಸಾರಿಗೆ ಇಲಾಖೆ ಲಂಚ ಪಡೆದ ತರಬೇತಿದಾರಾದ ಆರ್.ಸಿ ನರೇಗಲ್ಲ ಮಠ ಮತ್ತು ಸಿಎಂ ಹುಲಸೋಗಿ ಅಮಾನತು ಮಾಡಿದೆ. ಸಿಬ್ಬಂದಿ ಅಮಾನತು ಮಾಡಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಶಿಸ್ತುಪಾಲನಾಧಿಕಾರಿ ಆದೇಶ ಹೊರಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k