ಎಟಿಎಂ ಒಡೆದು ಹಣ ದೋಚಿದ ಪ್ರಕರಣ- ಹಣ ಕಳವಾಗಿಲ್ಲ ಎಂದ ಪೊಲೀಸರು

Public TV
1 Min Read
ATM

– 15 ಲಕ್ಷ ದೋಚಿದ್ದಾರೆ ಅಂದಿದ್ದ ಬ್ಯಾಂಕ್ ಮ್ಯಾನೇಜರ್

ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಎಟಿಎಂ ಗೆ ಎಂಟ್ರಿ ಕೊಟ್ಟ ಇಬ್ಬರು ಯುವಕರು ಯಂತ್ರ ಒಡೆದು ಹಾಕಿ ಹಣ ದೋಚಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಕ್ರಾಸ್ ನಲ್ಲಿ ನಡೆದಿದೆ.

ATM 1

ಗ್ರಾಮದ ಎಸ್ ಬಿಎಂ ಎಟಿಎಂ ಸೆಂಟರ್ ನಲ್ಲಿ ಘಟನೆ ನಡೆದಿದೆ. ಮುಸುಕುಧಾರಿಗಳಿಗೆ ಬಂದಿರುವ ಇಬ್ಬರು ಯುವಕರು ಮೊದಲು ಸಿಸಿ ಟಿವಿ ಕ್ಯಾಮೆರಾಗಳನ್ನ ಒಡೆದು ಹಾಕಿ ಕೃತ್ಯ ನಡೆಸಿದ್ದಾರೆ. ಬೆಳಗ್ಗೆ ಹಣ ಡ್ರಾ ಮಾಡಲು ಬಂದ ಗ್ರಾಹಕರು ಬ್ಯಾಂಕ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

ATM

ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ಯಾಂಕ್ ರಿಜನಲ್ ಮ್ಯಾನೇಜರ್ ಬ್ಯಾಂಕ್‍ಗೆ ಆಗಮಿಸಿ ಮ್ಯಾನೇಜರ್ ಬಳಿ ಮಾಹಿತಿ ಪಡೆದು ತದನಂತರ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ:  ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರಿಡುವುದು ಸೂಕ್ತ: ಶೋಭಾ

atm 4

ಸದ್ಯ ಎಟಿಎಂ ಯಂತ್ರದಲ್ಲಿನ ಹಣದ ಬಾಕ್ಸ್ ಹಾಗೆ ಇದೆ ಎನ್ನಲಾಗಿದ್ದು, ಹಣ ಕಳವಾಗಿಲ್ಲ ಅಂತ ಪೊಲೀಸರು ಹೇಳುತ್ತಿದ್ದಾರೆ. ಇದೊಂದು ಕಳವು ಯತ್ನ ಪ್ರಕರಣ ಅಂತಿದ್ದಾರೆ. ಆದರೆ ಮಧ್ಯಾಹ್ನ ಮಾಧ್ಯಮದವರಿಗೆ 15 ಲಕ್ಷ ಕಳವಾಗಿದೆ ಅಂತ ಬ್ಯಾಂಕ್ ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ರು.

Share This Article
Leave a Comment

Leave a Reply

Your email address will not be published. Required fields are marked *