ಕಲಬುರಗಿ: ಚುನಾವಣಾ ಆಯೋಗದ ನಿಯಮದಂತೆ ರಾತ್ರಿ ಹತ್ತು ಗಂಟೆಯೊಳಗೆ ಭಾಷಣ ಮುಗಿಸಬೇಕು ಆದ್ರೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದಂತೆಯೇ 9.59 ನಿಮಿಷಕ್ಕೆ ಬೆಂಬಲಿಗರೊಬ್ಬರು ಭಾಷಣ ನಿಲ್ಲಿಸುವಂತೆ ಸೂಚನೆ ಕೊಟ್ಟ ಪ್ರಸಂಗ ನಡೆದಿದೆ.
ಸೋಮವಾರ ನಗರದ ವಿರಶೈವ ಕಲ್ಯಾಣ ಮಂಟಪ ಮುಭಾಗದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ವಾಚ್ ನೋಡುತ್ತಲೇ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕಾರ್ಯಕರ್ತನೋರ್ವ ಮಧ್ಯೆ ಬಂದು ಸರ್ ಟೈಮಾಗ್ತಿದೆ ಅಂತಾ ಚೀಟಿ ನೀಡಲು ಮುಂದಾದಾಗ ಸಿಎಂ ಗರಂ ಆದರು.
- Advertisement 2
- Advertisement 3
ಏ ನನಗೆ ಗೊತ್ತಪ್ಪ ಟೈಮ್ ಎಷ್ಟಾಗ್ತಿದೆ ಅಂತಾ. ನನ್ನ ವಾಚ್ ಸರಿಯಾಗಿದೆ. ಚುನಾವಣಾಧಿಕಾರಿಗಳ ವಾಚ್ ಸರಿಯಿಲ್ಲ ಅಂತಾ ಅನ್ಸುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿ ಭಾಷಣವನ್ನ ಸರಿಯಾಗಿ ಹತ್ತು ಗಂಟೆಗೆ ಮುಗಿಸಿದರು.