ನನ್ನ ಸಾವಿಗೆ ಯಾರೂ ಕಾರಣರಲ್ಲ – ಒಂದೂವರೆ ಪುಟ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನಟ

Public TV
1 Min Read
Kushal Punjabi

ಮುಂಬೈ: ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಒಂದೂವರೆ ಪುಟ ಡೆತ್‍ನೋಟ್ ಬರೆದು ಬಾಲಿವುಡ್ ನಟ ಹಾಗೂ ಜೋರ್ ಕಾ ಜತ್ಕ ರಿಯಾಲಿಟಿ ಶೋ ವಿನ್ನರ್ ಕುಶಾಲ್ ಪಂಜಾಬಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಕುಶಾಲ್ ಪಂಜಾಬಿ ತಮ್ಮ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಮುಂಬೈನ ಬಾಬಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಕುಶಾಲ್ ಪಂಜಾಬಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕುಶಾಲ್ ಪಂಜಾಬಿ ಅವರ ನಿವಾಸದಲ್ಲಿ ಪೊಲೀಸರಿಗೆ ಒಂದೂವರೆ ಪುಟದ ಡೆತ್‍ನೋಟ್ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

https://www.instagram.com/p/BsEzuU6h3kU/?utm_source=ig_embed

ಕುಶಾಲ್ ಪಂಜಾಬಿ ಅವರು, ಇಂಗ್ಲಿಷ್ ನಲ್ಲಿ ಒಂದೂವರೆ ಪುಟದ ಡೆತ್‍ನೋಟ್ ಬರೆದಿದ್ದು, ಆದರಲ್ಲಿ ತನ್ನ ಆಸ್ತಿಯ ಶೇ.50 ರಷ್ಟು ಭಾಗ ತನ್ನ ತಂದೆ-ತಾಯಿ ಮತ್ತು ಸಹೋದರಿಯರಿಗೆ ಹಂಚಿಕೆಯಾಗಬೇಕು ಮತ್ತು ಉಳಿದ ಶೇ.50 ರಷ್ಟು ಆಸ್ತಿ ನನ್ನ ಮೂರು ವರ್ಷದ ಮಗ ಕಿಯಾನ್‍ಗೆ ಸೇರಬೇಕು ಎಂದು ಬರೆದಿದ್ದಾರೆ.

ಕುಶಾಲ್ ಪಂಜಾಬಿಯವರು, 2015 ರಲ್ಲಿ ತನ್ನ ಯೂರೋಪಿಯನ್ ಗೆಳತಿ ಅಡ್ರೆ ಡೊಲ್ಹೆನ್ ಅವರ ಜೊತೆ ಮದುವೆಯಾಗಿದ್ದು, ಈ ಜೋಡಿಗೆ ಮೂರು ವರ್ಷದ ಕಿಯಾನ್ ಹೆಸರಿನ ಮಗನಿದ್ದಾನೆ. ವರದಿಯ ಪ್ರಕಾರ ಕುಶಾಲ್ ಪಂಜಾಬಿಯವರು ಕಳೆದ ಕೆಲ ದಿನಗಳಿಂದ ಆರೋಗ್ಯ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಅವರು ಮದುವೆಯಾಗಿ 4 ವರ್ಷಗಳಾಗಿದ್ದು, ಅದರಲ್ಲು ಕೌಟುಂಬಿಕ ಕಲಹಗಳು ಇದ್ದು, ಅದರಿಂದಲು ಕುಶಾಲ್ ನೊಂದಿದ್ದರು ಎನ್ನಲಾಗಿದೆ.

https://www.instagram.com/p/BxuYrAdJ1VJ/?utm_source=ig_embed

ಕುಶಾಲ್ ಪಂಜಾಬಿಯವರು ಕೊನೆಯದಾಗಿ ತನ್ನ ಮಗನ ಫೋಟೋವನ್ನು ಇನ್‍ಸ್ಟಾಗ್ರಾಮ್‍ಗೆ ಹಾಕಿಕೊಂಡಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತಾನು ಮತ್ತು ಮಗ ಕಿಯಾನ್ ಇರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ಸ್ಟೋರಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *