ನವದೆಹಲಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ (Bengaluru Mysuru Expressway) ನಡೆದ ಅಪಘಾತಗಳಿಗೆ ಕಾರಣವೇನೆಂಬುದನ್ನು ಕೇಂದ್ರ ಹೆದ್ದಾರಿ ಸಚಿವಾಲಯ (MORTH) ತಿಳಿಸಿದೆ.
ಕಳೆದ ಆರು ತಿಂಗಳಲ್ಲಿ ನಡೆದ ಅಪಘಾತಗಳ (Accidents) ಪೈಕಿ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳಿವೆ. ಒಟ್ಟಾರೆಯಾಗಿ 65-75% ಅಪಘಾತಗಳು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಕಾರುಗಳು ಮತ್ತು ಬೈಕ್ಗಳಿಂದ ಉಂಟಾಗಿವೆ ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.
- Advertisement 2
- Advertisement 3
ಈ ಎಕ್ಸ್ಪ್ರೆಸ್ವೇಯ ವೇಗಮಿತಿ 80 ರಿಂದ 100 ಕಿಲೋಮೀಟರ್ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಎಕ್ಸ್ಪ್ರೆಸ್ವೇನ ಎರಡೂ ಬದಿಗಳಲ್ಲಿರುವ ಟೋಲ್ (Toll) ರಹಿತ ಸರ್ವೀಸ್ ರಸ್ತೆ ಬಳಸಬಹುದು ಎಂದಿರುವ ಸಚಿವಾಲಯ, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯಗಳಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾರಣ ಸರ್ವೀಸ್ ರಸ್ತೆ ಇಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಇದನ್ನೂ ಓದಿ: ಎಕ್ಸ್ಪ್ರೆಸ್ ವೇಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಚಕ್ರ ಬ್ಲಾಸ್ಟ್ – ತಪ್ಪಿದ ಭಾರೀ ದುರಂತ
- Advertisement 4
ಇನ್ನೂ ಮಂಡ್ಯದ ಉಮ್ಮಡನಹಳ್ಳಿ ಗೇಟ್ ಬಳಿ ಟಿಪ್ಪರ್ ಟೈರ್ ಸ್ಪೋಟಗೊಂಡು, ಟೈರ್ನ ಒಂದು ಭಾಗ ಇಪ್ಪತ್ತಡಿ ದೂರಕ್ಕೆ ಹಾರಿದೆ. ಈ ಸಂದರ್ಭದಲ್ಲಿ ಕಾರೊಂದನ್ನು ಬಿಟ್ಟು ಉಳಿದ ವಾಹನಗಳ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಟೈರ್ ಬ್ಲಾಸ್ಟ್ ಆಗುವ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ವಾಹನಗಳ ವೇಗಮಿತಿ ಹೆಚ್ಚಾಗುತ್ತಾ?
Web Stories