ಗದಗ: ವಿಷ ಆಹಾರ ಸೇವಿಸಿ 15 ಕ್ಕೂ ಹೆಚ್ಚು ಕುರಿಗಳ ಸಾವನ್ನಪ್ಪಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಜಮೀನಿನಲ್ಲಿ ಅಲ್ಲಲ್ಲಿ ಕುರಿಗಳು ಸತ್ತು ಬಿದ್ದಿವೆ. ಜಮೀನಿನ ಬೆಳೆಗೆ ಸಿಂಪಡಿಸಿದ ವಿಷ ಆಹಾರ ಸೇವಿಸಿ ಕುರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಾವನ್ನಪ್ಪಿರುವ ಕುರಿಗಳು ದೇವಪ್ಪ ಕಂಬಳಿ ಎಂಬವರಿಗೆ ಸೇರಿದ್ದವಾಗಿವೆ.
ಘಟನೆಯಲ್ಲಿ ಅನೇಕ ಕುರಿಗಳು ಅಸ್ವಸ್ಥತಗೊಂಡಿದ್ದು, ಸ್ಥಳಕ್ಕೆ ಪಶುವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಬರಗಾಲದಲ್ಲಿ 15 ಕುರಿಗಳನ್ನು ಕಳೆದುಕೊಂಡ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.