ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಪ್ರತಿನಿಧಿಸುವ ಬೆಂಗಳೂರಿನ ಯಲಹಂಕದಲ್ಲಿ ಫುಟ್ ಪಾತ್ ನಲ್ಲೇ ಅಂಗಡಿಗಳು ಉದ್ಭವವಾಗಿದೆ.
ಡೈರಿ ಸರ್ಕಲ್ ಬಳಿಯಿರುವ ಪಾದಾಚಾರಿ ಮಾರ್ಗದಲ್ಲಿ ಶಾಸಕರ ಪಿಎ ಮಲ್ಲಿಕಾರ್ಜುನ್ ನಂದಿನಿ ಮಿಲ್ಕ್ ಪಾರ್ಲರ್ ತೆರೆದಿದ್ದಾರೆ. ಅದೇ ಫುಟ್ ಪಾತ್ನಲ್ಲಿ ಶುದ್ಧ ನೀರಿನ ಘಟಕ ಕೂಡ ಸ್ಥಾಪಿಸಿದ್ದಾರೆ. ನಿಯಮಗಳಿಗೆ ವಿರುದ್ಧವಾಗಿಯೇ ಸ್ವತಃ ಶಾಸಕರು ಮತ್ತು ಅಟ್ಟೂರು ವಾರ್ಡ್ನ ಕಾರ್ಪೋರೇಟರ್ ನೇತ್ರಾ ಪಲ್ಲವಿ ಅನುಮತಿ ದಯಪಾಲಿಸಿದ್ದಾರೆ.
ಇವರ ಈ ಆಟದಿಂದಾಗಿ ರಸ್ತೆಯ ಪಕ್ಕದಲ್ಲಿ ಹೋಗೋಕೆ ಜಾಗವಿಲ್ಲದೇ ಜನಸಾಮಾನ್ಯರು ಒದ್ದಾಡುತ್ತಿದ್ದಾರೆ. ಆದರೆ ಘನವೆತ್ತ ಬಿಜೆಪಿ ಕಾರ್ಪೊರೇಟರ್ ಯಾಕ್ ಮೇಡಂ ಈ ರೀತಿ ಅಂದರೆ ಉತ್ತರಿಸೋಕೆ ಸಿದ್ಧರಿಲ್ಲ. ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.