ದೂರು ನೀಡಿದವರ ವಿರುದ್ಧವೇ ದೂರು ನೀಡಿದ ಶಾಸಕ ಆನಂದ್ ಸಿಂಗ್

Public TV
1 Min Read
anand sing

ಬಳ್ಳಾರಿ: ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ, ಅವರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ನಾಯಕರು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಆದರೆ ನಾನು ಕಾಣೆಯಾಗಿಲ್ಲ. ಎಲ್ಲೂ ಹೋಗಿಲ್ಲವೆಂದು ಶಾಸಕ ಆನಂದ್ ಸಿಂಗ್ ಠಾಣೆಗೆ ಹಾಜರಾದ ಬೆನ್ನಲ್ಲೇ ತಮ್ಮ ವಿರುದ್ಧ ದೂರು ನೀಡಿದ ಸ್ವ-ಪಕ್ಷದ ನಾಯಕರ ವಿರುದ್ಧ ಆನಂದ್ ಸಿಂಗ್ ಪ್ರತಿದೂರು ದಾಖಲಿಸಿದ್ದಾರೆ.

anand sing a 1

ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆಂದು ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಜುಲೈ 17 ರಂದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಆದರೆ ಎರಡು ದಿನಗಳ ಹಿಂದೆ ಪೊಲೀಸ್ ಠಾಣೆಗೆ ಹಾಜರಾಗಿದ್ದ ಆನಂದ್ ಸಿಂಗ್ ನಾನು ಕಾಣೆಯಾಗಿಲ್ಲ. ತಂದೆಯವರ ಆರೋಗ್ಯ ಹದಗೆಟ್ಟು ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ನನ್ನ ಗೌರವ ಘನತೆ ಹಾಳು ಮಾಡುವ ಉದ್ದೇಶದಿಂದ ದೂರು ನೀಡಿದ್ದಾರೆ.

ನನ್ನ ಗೌರವಕ್ಕೆ ಹಾನಿಯುಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕ ಆನಂದ್ ಸಿಂಗ್ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಿ ದೂರು ದಾಖಲಿಸಿರುವುದು ವಿಶೇಷವಾಗಿದೆ.

BLY ANAND SINGH

Share This Article
Leave a Comment

Leave a Reply

Your email address will not be published. Required fields are marked *