ಮಂಡ್ಯ: ನವ ದಂಪತಿಗೆ ಹಣ, ಚಿನ್ನಾಭರಣವನ್ನು ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ನೂತನ ಜೋಡಿಗೆ ದೇಶಿ ತಳಿಯ ಹಸುವಿನ ಕರುಗಳನ್ನು ಉಡುಗೊರೆ ನೀಡಲಾಗಿದೆ.
ವರ ಕಿರಣ್ ಕುಮಾರ್ ಹಾಗೂ ವಧು ನಾಗಶ್ರೀ ಇಂದು ಮಂಡ್ಯ ಜಿಲ್ಲೆಯ ಮದ್ದೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರಣ್ ಕುಮಾರ್ ಮತ್ತು ನಾಗಶ್ರೀ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದು, ಇವರಿಗೆ ಸಾವಯವ ಕೃಷಿ ಮಾಡುವ ಸ್ನೇಹಿತರು ಎರಡು ಗಿಡ್ಡ ತಳಿಯ ಎರಡು ಕರುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
- Advertisement 2
- Advertisement 3
ಭಾನುವಾರ ಕಳೆದ ರಾತ್ರಿ ಆರಕ್ಷತೆಗೆ ನಿಂತಿದ್ದ ಜೋಡಿಯನ್ನು ಕಲ್ಯಾಣ ಮಂಟಪದಿಂದ ಹೊರಗೆ ಕರೆತಂದು ಕರುಗಳನ್ನು ಗಿಫ್ಟ್ ನೀಡಿದ್ದಾರೆ. ಈ ವಿಶಿಷ್ಟ ಉಡುಗೊರೆಯನ್ನು ನೂತನ ವಧು ವರರು ಖುಷಿಯಿಂದ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
- Advertisement 4
ಇದೇ ವೇಳೆ ಮಾತನಾಡಿದ ವಧು ನಾಗಶ್ರೀ, ತಮಗೆ ದೊರೆತಿರುವ ಇಂತಹ ವಿಶೇಷ ಗಿಫ್ಟ್ ಇದುವರೆಗೂ ಯಾರು ಕೊಟ್ಟಿರಲು ಸಾಧ್ಯವೇ ಇಲ್ಲ. ಮೊದಲ ಬಾರಿಗೆ ಈ ರೀತಿ ಉಡುಗೊರೆ ಕೊಟ್ಟಿದ್ದಾರೆ. ಇದು ತುಂಬಾ ನೆನಪಿನಲ್ಲಿ ಇಟ್ಟುಕೊಳ್ಳುವ ಗಿಫ್ಟ್ ಆಗಿದ್ದು, ತುಂಬಾ ಖುಷಿಯಾಗಿದೆ ಎಂದು ಸಂತಸದಿಂದ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv