ಮೊಬೈಲ್ ಒಡೆದು ಹಾಕಿದ್ದಕ್ಕೆ ವ್ಯಕ್ತಿಯನ್ನೇ ಹತ್ಯೆಗೈದ ಅಪ್ರಾಪ್ತ

Public TV
1 Min Read
mobile

ಮುಂಬೈ: ಮೊಬೈಲ್ ಫೋನ್ ಒಡೆದು ಹಾಕಿದ್ದಕ್ಕೆ ಕಾರ್ಮಿಕನೊಬ್ಬನನ್ನು ಹುಡುಗನೊಬ್ಬ ಹತ್ಯೆ ಗೈದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸಾಲಿರಾಮ್ ಅಲಿಯಾಸ್ ರಿಂಕು ಕುಮಾರ್ (31) ಎಂದು ಗುರುತಿಸಲಾಗಿದ್ದು, ಬುಧವಾರ ತಡರಾತ್ರಿ ನಡೆದಿದೆ. ಇದೀಗ ಆರೋಪಿ ಹುಡುಗನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

crim

ರಿಂಕು ಕುಮಾರ್ ಮತ್ತು ಆರೋಪಿ ಮೂಲತಃ ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯವರಾಗಿದ್ದು, ನಗರದಲ್ಲಿ ವಾಸವಾಗಿದ್ದರು. ರಿಂಕು ಕುಮಾರ್ ಹಳ್ಳಿಯಲ್ಲಿರುವ ತನ್ನ ಸಂಬಂಧಿಕರಿಗೆ ಕರೆ ಮಾಡಲು ಮೊಬೈಲ್ ಫೋನ್ ನೀಡುವಂತೆ ಹುಡುಗನಿಗೆ ಕೇಳಿದ್ದಾರೆ. ಆದರೆ ಮೊಬೈಲ್ ನೀಡಲು ಹುಡುಗ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

Police Jeep

ನಂತರ ಕೆಲವು ಗಂಟೆಗಳ ಬಳಿಕ ರಿಂಕು ಕುಮಾರ್ ಹುಡುಗನ ಮೊಬೈಲ್‍ನಿಂದ ಮಾಡಿ ಮೊಬೈಲ್ ಫೋನ್ ನೆಲಕ್ಕೆ ಎಸೆದು ಒಡೆದು ಹಾಕಿದ್ದಾರೆ. ಇದರಿಂದ ಕೋಪಗೊಂಡ ಹುಡುಗ ಕುಮಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಸ್ಥಿತಿ ಗಂಭೀರ – ದಿನ ಬಳಕೆ ವಸ್ತುಗಳ ಬೆಲೆ ಎಷ್ಟು?

Share This Article
Leave a Comment

Leave a Reply

Your email address will not be published. Required fields are marked *