ನಿಶ್ಚಿತಾರ್ಥದ ಹಿಂದಿನ ದಿನವೇ ಯುವಕನ ನಿಗೂಢ ಸಾವು

Public TV
0 Min Read
CAR 11

ತುಮಕೂರು: ನಿಶ್ಚಿತಾರ್ಥದ ಮುನ್ನ ದಿನವೇ ಯುವಕ ಶವವಾಗಿ ಪತ್ತೆಯಾಗಿರೋ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹಾಗಲನಹಳ್ಳಿಯಲ್ಲಿ ನಡೆದಿದೆ.

33 ವರ್ಷದ ಹಂಸಕುಮಾರ್ ಮೃತ ಯುವಕ. ಹಂಸಕುಮಾರ್‍ಗೆ ಬಾಗಲಕೋಟೆ ಯುವತಿಯೊಂದಿಗೆ ಇಂದು ನಿಶ್ಚಿತಾರ್ಥ ಇತ್ತು. ಶುಕ್ರವಾರ ಆಮಂತ್ರಣ ಹಂಚಲು ಹೋಗಿದ್ದ ಹಂಸಕುಮಾರ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾರು ಸಮೇತ ಹಂಸಕುಮಾರ್ ಸುಟ್ಟು ಕರಕಲಾಗಿದ್ದಾರೆ.

ಹಳೆಯ ದ್ವೇಷದ ಹಿನ್ನಲೆಯಲ್ಲಿ ಹಂಸಕುಮಾರ್‍ರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

CAR 1 2

CAR 2 2

CAR 3 2

CAR 4 2

CAR 5 2

CAR 7 2

CAR 9 2

CAR 10 2

Share This Article
Leave a Comment

Leave a Reply

Your email address will not be published. Required fields are marked *