ಬೆಂಗಳೂರು: ರೌಡಿ ಮನೆಗೆ ನುಗ್ಗಿ ಮತ್ತೊಂದು ರೌಡಿ ಗ್ಯಾಂಗ್ ಅಟ್ಯಾಕ್ ಮಾಡಿದ ಘಟನೆ ಏ. 4ರಂದು ಬೆಂಗಳೂರಿನ ಹನುಮಂತನಗರ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರೌಡಿ ಮುಕುಂದ ಮೇಲೆ ರೌಡಿ ರಜ್ಜು ಗ್ಯಾಂಗ್ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ರೌಡಿ ರಜ್ಜು ಮತ್ತು ರೌಡಿ ಮುಕುಂದ ನಡುವೆ ಇದ್ದ ವೈಷಮ್ಯವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ವೈಷಮ್ಯದ ಹಿನ್ನೆಲೆ ರಜ್ಜು ಮೇಲೆ ಕಳೆದ ತಿಂಗಳು ಮುಕುಂದನ ಮೇಲೆ ಅಟ್ಯಾಕ್ ಮಾಡಿದ್ದ. ಈ ಪ್ರಕರಣದಲ್ಲಿ ಮುಕುಂದನನ್ನು ಪೊಲೀಸರು ಗೂಂಡಾ ಅಟ್ಯಾಕ್ನಲ್ಲಿ ಜೈಲಿಗೆ ಕಳುಹಿಸಿದ್ದರು. ರಜ್ಜು ಪ್ರಕರಣದ ಸೇಡು ತೀರಿಸಿಕೊಳ್ಳೋಕೆ ಮುಕುಂದನ ಹುಡುಗರ ಮೇಲೆ ಅಟ್ಯಾಕ್ ಮಾಡಿದ್ದಾನೆ.
ರೌಡಿಶೀಟರ್ ರಜ್ಜು ಸಹಚರರಿಂದ ಮುಕುಂದನ ಹುಡುಗರ ಮನೆ ಮೇಲೆ ದಾಳಿ ನಡೆದಿದೆ. ಮನೆಗೆ ನುಗ್ಗಿ ಮನಬಂದಂತೆ ಮಚ್ಚು ಲಾಂಗ್ಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಕೋರರು ನಡೆಸಿದ ಈ ಭೀಕರ ಕೃತ್ಯ ಸಿಸಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.