ಕೋಲಾರ: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅಭಿಮಾನಿಯೋರ್ವ ಬೆನ್ನ ಮೇಲೆ ಅವರ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಯುವಕ ಶ್ರೀನಾಥ್ ತನ್ನ ಬೆನ್ನ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶ್ರೀನಾಥ್ಗೆ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಳ್ಳಲು ಅವರ ಆದರ್ಶ ನಡೆಯೇ ಕಾರಣವಂತೆ, ಅವರನ್ನು ಚಿಕ್ಕವಯಸ್ಸಿನಿಂದಲೂ ಬಹಳ ಆರಾಧಿಸುತ್ತೇನೆ. ದೊಡ್ಡ ದೊಡ್ಡ ಪದವಿಯಲ್ಲಿದ್ದರೂ ಜನರ ಜೊತೆ ಬೆರೆಯುವ ಅವರ ಸರಳತೆ ನೋಡಿ ನಾನು ಅವರ ಪಕ್ಕ ಅಭಿಮಾನಿಯಾಗಿಬಿಟ್ಟೆ ಎಂದು ಹೇಳಿದ್ದಾರೆ.
ಮೊದಲಿನಿಂದಲೂ ಅವರನ್ನು ಆರಾಧಿಸುತ್ತಿದ್ದ ನನಗೆ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ವೇಳೆ ಬಡವರಿಗಾಗಿ ಜಾರಿಗೆ ತಂದ ಆರೋಗ್ಯ ಯೋಜನೆಗಳು, ಬರಗಾಲದಿಂದ ತತ್ತರಿಸಿದ್ದ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ತಂದಿದ್ದು ಇವೆಲ್ಲವೂ ನನಗೆ ಆದರ್ಶ ಎನ್ನಿಸಿ ಜೀವನ ಪರ್ಯಂತ ಅವರ ನೆನಪು ಇರುವಂತೆ ಮಾಡಲು ತನ್ನ ಬೆನ್ನು ಮೇಲೆ ಸುಮಾರು 50 ಸಾವಿರ ಖರ್ಚು ಮಾಡಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಶ್ರೀನಾಥ್ ಹೇಳಿದ್ದಾರೆ.
ರಮೇಶ್ಕುಮಾರ್ ಒಬ್ಬ ಅಪರೂಪದ ಸಂವಿಧಾನವನ್ನು ಪರಿಪಾಲಿಸುವ ರಾಜಕಾರಣಿ. ಅವರು ಯಾವುದೇ ಒತ್ತಡಕ್ಕೆ ಒಳಗಾಗುವ ರಾಜಕಾರಣಿ ಅಲ್ಲ ಎನ್ನುತ್ತಾರೆ ಶ್ರೀನಾಥ್.