ಮೈಸೂರು: ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಕಾಂಗ್ರೆಸ್ ಪಾಲಾಗಿದೆ. ಇನ್ನು 2 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ.
ಚಾಮರಾಜ, ಪಿರಿಯಾಪಟ್ಟಣ, ಕೆ.ಆರ್ ನಗರ, ಟಿ.ನರಸೀಪುರ, ನರಸಿಂಹರಾಜ, ನಂಜನಗೂಡು, ಎಚ್.ಡಿ ಕೋಟೆ, ವರುಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇನ್ನು ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಗೆಲುವಾಗಿದೆ. ಕೃಷ್ಣರಾಜ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿದೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ 4 ಕಾಂಗ್ರೆಸ್, 3 ಕಡೆ ಬಿಜೆಪಿಗೆ ಗೆಲುವು
ಹರೀಶ್ ಗೌಡ, ತನ್ವೀರ್ ಸೇಠ್, ಕೆ.ವೆಂಕಟೇಶ್, ಡಾ.ಎಚ್.ಸಿ ಮಹದೇವಪ್ಪ, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಡಿ.ರವಿ ಶಂಕರ್, ಸಿದ್ದರಾಮಯ್ಯ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಹಾಗೆಯ ಕೃಷ್ಣರಾಜದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಗೆಲುವು ಸಾಧಿಸಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಜೆಡಿಎಸ್ ಕೋಟೆಯನ್ನು ಪುಡಿಗೈದ ಕಾಂಗ್ರೆಸ್
ಗೆದ್ದವರು ಯಾರು?
1. ಕೃಷ್ಣರಾಜ: ಶ್ರೀವತ್ಸ, ಬಿಜೆಪಿ – 73,670 ಮತಗಳು
2. ಚಾಮರಾಜ: ಹರೀಶ್ ಗೌಡ, ಕಾಂಗ್ರೆಸ್ – 72,931 ಮತಗಳು
3. ನರಸಿಂಹರಾಜ: ತನ್ವೀರ್ ಸೇಠ್, ಕಾಂಗ್ರೆಸ್ – 71,862 ಮತಗಳು
4. ಚಾಮುಂಡೇಶ್ವರಿ: ಜಿ.ಟಿ ದೇವೇಗೌಡ, ಜೆಡಿಎಸ್- 1,34,035 ಮತಗಳು
5. ಪಿರಿಯಾಪಟ್ಟಣ: ಕೆ.ವೆಂಕಟೇಶ್, ಕಾಂಗ್ರೆಸ್ – 85,289 ಮತಗಳು
6 ಟಿ.ನರಸೀಪುರ: ಡಾ.ಎಚ್.ಸಿ ಮಹದೇವಪ್ಪ, ಕಾಂಗ್ರೆಸ್- 77,884 ಮತಗಳು
7) ನಂಜನಗೂಡು: ದರ್ಶನ್ ಧ್ರುವನಾರಾಯಣ, ಕಾಂಗ್ರೆಸ್-
8) ಎಚ್.ಡಿ ಕೋಟೆ: ಅನಿಲ್ ಚಿಕ್ಕಮಾದು, ಕಾಂಗ್ರೆಸ್ – 84,359 ಮತಗಳು
9) ಕೆ.ಆರ್ ನಗರ: ಡಿ.ರವಿ ಶಂಕರ್, ಕಾಂಗ್ರೆಸ್ – 97,704 ಮತಗಳು
10) ವರುಣ: ಸಿದ್ದರಾಮಯ್ಯ, ಕಾಂಗ್ರೆಸ್- 1,16,856 ಮತಗಳು
11) ಹುಣಸೂರು : ಜಿ.ಡಿ ಹರೀಶ್ ಗೌಡ, ಜೆಡಿಎಸ್- 94,666 ಮತಗಳು