ಬೆಂಗಳೂರು: ಈ ವಾರ ಬಿಜೆಪಿ (BJP) ಸೋಲಿನ ಆತ್ಮಾವಲೋಕನ ಸಭೆ ನಡೆಸಲು ಮುಂದಾಗಿದೆ.
ಜೂನ್ 8 ಅಥವಾ 9 ರಂದು ಬೆಂಗಳೂರಿನಲ್ಲಿ ಆತ್ಮಾವಲೋಕನ ಸಭೆ (Introspection Meeting) ನಡೆಯಲಿದ್ದು, ಈ ಸಭೆಗೆ ದೆಹಲಿಯಿಂದ ವಿಶೇಷ ವೀಕ್ಷಕರು ಬರಲಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸಲು ಮುಂದಾದ ಸೌದಿ – ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
ಗೆದ್ದ ಶಾಸಕರ ಜೊತ ಮತ್ತು ಪರಾಜಿತ ಶಾಸಕರ ಜತೆ ಪ್ರತ್ಯೇಕ ಆತ್ಮಾವಲೋಕನ ಸಭೆ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಉಸ್ತುವಾರಿ ಅರುಣ್ ಸಿಂಗ್ ಮುಂತಾದವರು ಭಾಗಿಯಾಗಲಿದ್ದಾರೆ.