ಬೆಂಗಳೂರು: ಹಳೇ ಮೈಸೂರು (Old Mysuru) ಭಾಗದ ಯಾತ್ರೆಯಲ್ಲಿ ಹೆಚ್ಡಿ ಕುಮಾರಸ್ವಾಮಿಯೇ (HD Kumaraswamy) ಟಾರ್ಗೆಟ್ ಎನ್ನಲಾಗಿದೆ. ಉತ್ತರ ಕರ್ನಾಟಕದಲ್ಲಿ ಒಂದು ಲೆಕ್ಕ ಮಂಡ್ಯ, ಮೈಸೂರಲ್ಲಿ ಇನ್ನೊಂದು ಲೆಕ್ಕ ಎಂಬ ತಂತ್ರಗಾರಿಕೆ. ಸಿದ್ದರಾಮಯ್ಯ (Siddaramaiah) ಟಾರ್ಗೆಟ್ ಹೆಚ್ಡಿಕೆ. ಹಳೇ ಆಟದಲ್ಲಿ ಸಿದ್ದರಾಮಯ್ಯ ಸ್ವಲ್ಪ ಚೇಂಜ್ ಆಗ್ಬಿಟ್ರಾ ಎಂಬ ಚರ್ಚೆ ಜೋರಾಗಿದೆ. ಹೆಚ್ಡಿಕೆ ವಿರುದ್ಧ, ಗೌಡರ ಕುಟುಂಬದ ವಿರುದ್ಧ ಮೌನಾಸ್ತ್ರ ಪ್ರಯೋಗಿಸಿದ್ದ ಸಿದ್ದು ಬದಲಾದ್ರಾ ಎಂಬ ಪ್ರಶ್ನೆಗಳು ಎದ್ದಿವೆ.
ಅಂದಹಾಗೆ ಮುಸ್ಲಿಂ ಮತ ವಿಭಜನೆ ತಡೆಯಲು ಗುರು ಶಿಷ್ಯರಿಂದ ಮೌನಾಸ್ತ್ರ ಕೆಳಗಿಟ್ಟು ಯುದ್ಧ ಶುರು ಮಾಡಿದ್ದಾರೆ ಎಂಬುದು ಕಾಂಗ್ರೆಸ್ ಮೂಲಗಳ ಮಾಹಿತಿ. ಈಗಾಗಲೇ ಹೈದರಾಬಾದ್ ಕರ್ನಾಟಕದಲ್ಲಿ ನಿಂತು ಹೆಚ್ಡಿಕೆಗೆ ಗುದ್ದು ಕೊಟ್ಟಿದ್ದ ಸಿದ್ದು, ಜಮೀರ್ (Zameer Ahmed Khan) ಹಳೇ ಮೈಸೂರು ಭಾಗದ ಬಸ್ ಯಾತ್ರೆ ವೇಳೆ ಹೆಚ್ಡಿಕೆಯನ್ನೇ ಟಾರ್ಗೆಟ್ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರಂತೆ. ಗೌಡರ ವಿರುದ್ಧ ಮಾತನಾಡದೇ ಹೆಚ್ಡಿಕೆಯನ್ನೇ ಗುರಿಯಾಗಿಸಿ ರಾಜಕೀಯ ದಾಳ ಉರುಳಿಸಲು ಪ್ಲ್ಯಾನ್ ನಡೆದಿದೆ. ಇದನ್ನೂ ಓದಿ: ಹೆಚ್ಡಿಕೆಗೆ ಚಕ್ರವ್ಯೂಹ, ಪುತ್ರ ನಿಖಿಲ್ಗೆ ಪದ್ಮವ್ಯೂಹ – ಏನಿದು ಬಿಜೆಪಿ ಗೇಮ್?
ಈಗಾಗಲೇ ಮುಸ್ಲಿಂ ಮತಗಳು (Muslims Votes) ವಿಭಜನೆ ಪ್ರಯತ್ನಿಸಿ ಹೆಚ್ಡಿಕೆ ಆರ್ಎಸ್ಎಸ್, ಬಿಜೆಪಿ ಮೇಲೆ ಮುಗಿಬೀಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡಬಾರದೆಂದು ಸಿದ್ದರಾಮಯ್ಯ ಖಡಕ್ ಸಂದೇಶ. ಜಮೀರ್ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ವೇಳೆ ಸಂದೇಶ ರವಾನಿಸಿದ್ದಾರೆ. ಹಾಗಾಗಿ ಅಹಿಂದ ಮತಗಳ ಮೇಲೆ ಕಣ್ಣು, ಹೆಚ್ಡಿಕೆ ಹಳೇ ಮೈಸೂರು ಟಾರ್ಗೆಟ್ ಸಕ್ಸಸ್ ಆಗುತ್ತಾ ಎಂಬ ಕುತೂಹಲವಿದೆ. ಹಾಗಾದ್ರೆ ಗುರು ಶಿಷ್ಯರ ಅಸ್ತ್ರವನ್ನ ಹೆಚ್ಡಿಕೆ ಒಬ್ಬರೇ ಎದುರಿಸ್ತಾರಾ? ಓಲ್ಡ್ ಮೈಸೂರಲ್ಲಿ ಓಲ್ಡ್ ಫೈಟ್ ಶುರುನಾ ಎಂಬುದನ್ನು ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k