ಧಾರವಾಡ: ಹಿಂದೆ ಚುನಾವಣೆಯಲ್ಲಿ (Election) ಮುತ್ತೈದೆಯರು ಬೆಳಿಗ್ಗೆ ಬಂದು ಮೊದಲು ಮತ ಹಾಕುತ್ತಿದ್ದರು. ಆದರೀಗ ಆ ಸಂಸ್ಕೃತಿಯನ್ನು ಕಳೆದುಕೊಂಡಿದ್ದೇವೆ. 5 ಸಾವಿರ ಕೊಟ್ಟರೆ ಮತ (Vote) ಹಾಕ್ತೇವೆ ಅನ್ನುವಂತ ಕೆಟ್ಟ ಸ್ಥಿತಿ ಸೃಷ್ಟಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಬೇಸರ ವ್ಯಕ್ತಪಡಿಸಿದ್ದಾರೆ.
ಧಾರವಾಡದ (Dharwad) ಬೇಂದ್ರೆ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅವನು ಯಾವನೋ 6 ಸಾವಿರ ಕೊಟ್ಟು ಮತ ಹಾಕಿಸಿಕೊಳ್ತೇವೆ ಅಂದಿದ್ದಾನೆ. ಇನ್ನೊಬ್ಬ ಟಿಕೆಟ್ಗೆ (Election Ticket) 20 ಕೋಟಿ ಕೊಡ್ತೀನಿ ಅಂತಾನೆ. ನಾವೇ ಜನರನ್ನ ಭ್ರಷ್ಟರನ್ನಾಗಿ ಮಾಡ್ತಿದ್ದೇವೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ – ಮೋದಿ ಸಂತಾಪ
ಚುನಾವಣೆಗೆ (Election) ಬೆಲೆ ಇಲ್ಲದಂತಾಗಿದೆ. ಈಗ ರಾಜಕೀಯಕ್ಕೆ (Politics) ರಿಯಲ್ ಎಸ್ಟೇಟ್ನವರೂ ಬಂದಿದ್ದಾರೆ. ಇವತ್ತಿನ ವ್ಯವಸ್ಥೆ ನೋಡಿದ್ರೆ ಎಲ್ಲಿ ನಿಂತಿದ್ದೇವೆ ಅಂತಾ ಭಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
ದಿ. ಡಿ.ಕೆ ನಾಯ್ಕರ್ ನಮ್ಮನ್ನು ಬಹಳ ಪ್ರೀತಿಯಿಂದ ಬೆಳಸಿದವರು. ಆಗ ಜಾತಿ, ದುಡ್ಡು ಏನೂ ಗೊತ್ತಿರಲಿಲ್ಲ. ಈಗ ನಾವು ಯಾರ ಹತ್ತಿರ ಹೇಳಿಕೊಳ್ಳೋಣ? ರಾಜಕಾರಣಿ ಹಾಗೂ ಮತದಾರ ಇಬ್ಬರೂ ಭ್ರಷ್ಟರಾಗಿದ್ದಾರೆ. ನಾನು ಈ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲಲ್ಲ ಎಂದು ಭಾವುಕರಾದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k