ಹುಬ್ಬಳ್ಳಿ: ಕಾಂಗ್ರೆಸ್ (Congress) ಪಕ್ಷದವರು ಹತಾಶರಾಗಿದ್ದಾರೆ ಎನ್ನುವುದು, ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗುತ್ತಿದೆ. ಈ ಹಿಂದೆ ಎಂದೂ ಬಳಸದ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟೀಕಿಸಿದರು.
ಈ ಬಗ್ಗೆ ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಮಿತ್ ಶಾ (Amit Shah) ಅವರು ನಿನ್ನೆ (ಶನಿವಾರ) ಒಂದು ದಿನಕ್ಕೆ ಸಂಚಲನ ಉಂಟು ಮಾಡಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಗಟ್ಟಿಯಾಗಿದೆ. ಅದಕ್ಕೆ ಅಮಿತ್ ಶಾ ಇನ್ನಷ್ಟು ಶಕ್ತಿ ಹುರುಪು ಕೊಟ್ಟಿದ್ದಾರೆ. ಶಾ ರಾಜ್ಯ ನಾಯಕರಿಗೆ ಏನೂ ಸೂಚನೆ ಕೊಟ್ಟಿಲ್ಲ. ಆದರೆ ಚುನಾವಣೆಗೆ (Election) ತಯಾರಿ ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್ನಲ್ಲಿ ಕುಟುಂಬ ಕದನ
ಯಾರು ಏನೇ ಹೇಳಲಿ ರಿಯಾಲಿಟಿ ಬೇರೆಯಿದೆ. ಕಾಂಗ್ರೆಸ್ನವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಪೋಜು ಕೊಡುತ್ತಿದ್ದಾರೆ. ಆದರೆ ಈ ಬಾರಿ ನಮ್ಮ ಗೆಲುವು ಖಂಡಿತ ಎಂದ ಅವರು, ಬೆಳಗಾವಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಸಂತೋಷ್ ಅವರು ಸಂಘಟನಾತ್ಮಕ ವಿಷಯವಾಗಿ ಭೇಟಿ ಮಾಡುತ್ತಿದ್ದಾರೆ. ಸರ್ವೇ ಕಾರ್ಯ ನಡೆಯುತ್ತಿದೆ. ಆದರೆ ಯಾವುದು ಅಂತಿಮ ಅಲ್ಲ. ಇನ್ನೊಂದು ಗೋ ಬ್ಯಾಕ್ ಅಶೋಕ್ ಅಭಿಯಾನ ಯಾರೋ 4 ಜನ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: RSS ನಾಯಕರ ಜೊತೆ ಅಮಿತ್ ಶಾ ರಹಸ್ಯ ಸಭೆ – ಏನಿದರ ಗುಟ್ಟು..!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k