ಬೆಂಗಳೂರು: ಚುನಾವಣಾ ತಂತ್ರವಾಗಿ ಹೊಸ ಪ್ಲಾನ್ ಮಾಡಿರೋ ಜೆಡಿಎಸ್, ಬಿಜೆಪಿ-ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಮತ್ತೆ ಹಳ್ಳಿಗೆ ಕಡೆ ಹೊರಟಿದೆ.
ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟಿರೋ ಜೆಡಿಎಸ್ ಒಂದೂವರೆ ತಿಂಗಳು ಉತ್ತರ ಕರ್ನಾಟಕ, ಹೈದರಬಾದ್ ಕರ್ನಾಟಕ ಭಾಗಗಳ ಹಳ್ಳಿಗಳಲ್ಲಿ ಬೀಡಾರ ಹೂಡಲಿದ್ದಾರಂತೆ. ಯಾದಗಿರಿಯಿಂದ ಪಾದ ಯಾತ್ರೆ, ಬಿಜಾಪುರ ಭಾಗದಲ್ಲಿ ಬಹೃತ್ ರೈತ ಸಮಾವೇಶ ಮಾಡೋ ಉದ್ದೇಶವೂ ಇದೆ.
ಕೃಷ್ಣೆಯ ಭಾಗದ ರಾಜಕೀಯವನ್ನ ಹೆಚ್ಡಿ ಕುಮಾರಸ್ವಾಮಿ ನೋಡಿಕೊಂಡ್ರೆ, ಕಾವೇರಿ ಭಾಗದ ರಾಜಕೀಯವನ್ನ ಅನಿತಾ ಕುಮಾರಸ್ವಾಮಿ ಅವರ ಹೆಗಲಿಗೆ ಹೊರಿಸೋ ಪ್ಲಾನ್ ಕೂಡ ರೆಡಿ ಇದೆ ಎಂದು ಹೇಳಲಾಗಿದೆ.