ಹಾಸನ: ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ ಎಂದು ಸಚಿವ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಅವರು ಮಾತಿನ ಭರದಲ್ಲಿ ಹೇಳಿಕೆ ನೀಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಜಾಸೇವ ಅಭಿಯಾನ ನಡೀತು. ಸಕಲೇಶಪುರದ (Sakaleshpur) ತಹಸೀಲ್ದಾರ್ ಕಚೇರಿಯಲ್ಲಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಮಾತಿನ ಬರದಲ್ಲಿ `ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ’ ಎಂದಿದ್ದಾರೆ. ಇದನ್ನೂ ಓದಿ: KPSC ಹಗರಣ – ಇಡಿ ತನಿಖೆಗೆ ಸರಿಯಾಗಿ ಸಹಕರಿಸದಿದ್ದಕ್ಕೆ ಗ್ಯಾನೇಂದ್ರ, ಕನ್ನಾಳೆ ಅರೆಸ್ಟ್
ಸಕಲೇಶಪುರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವಾ ಆಂದೋಲನಲ್ಲಿ ಸಚಿವರ ಮಾತಿಗೆ ಕೆರಳಿದ ಜನರು ಗೌರವಯುತವಾಗಿ ಯಾಕೆ ಕೊಡಬೇಕು? ಅವರಿಗೆ ಸಂಬಳ ಕೊಡಲ್ವಾ? ಎಂದು ಪ್ರಶ್ನಿಸಿದರು. ಅವನು ಸಭೆ ಹಾಳು ಮಾಡಲು ಬಂದಿದ್ದಾನೆ ಎಂದು ಪೊಲೀಸರ ಮೂಲಕ ಸಚಿವರು ವ್ಯಕ್ತಿಯನ್ನು ಸಭೆಯಿಂದ ಹೊರ ಕಳುಹಿಸಿದರು.
ತುಮಕೂರಿನ (Tumakuru) ಹುಲಿಯೂರು (Huliyoor) ದುರ್ಗದಲ್ಲಿ ಡಿಸಿಎಂ ಪರಮೇಶ್ವರ್, ಶಾಸಕ ಕುಣಿಗಲ್ ರಂಗನಾಥ್, ಡಿಸಿ ಶುಭಾಕಲ್ಯಾಣ್ ಭಾಗಿಯಾಗಿದ್ದರು. ಹಲವು ಕೌಂಟರ್ಗಳ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಹುಲಿಯೂರುದುರ್ಗ ಹೋಬಳಿಯನ್ನು ತಾಲೂಕಾ ಕೇಂದ್ರವನ್ನಾಗಿ ಮಾಡಲು ರೈತರು ಆಗ್ರಹಿಸಿ ಡಿಸಿಎಂಗೆ ಮನವಿ ಕೊಟ್ಟರು. ಇದನ್ನೂ ಓದಿ: ಸಿಎಂ ವೇದಿಕೆಯಲ್ಲೇ ವಂದೇ ಮಾತರಂ ಜಟಾಪಟಿ; 2 ಸಾಲು ಗಾಯನಕ್ಕೆ ಶಾಸಕ ಚನ್ನಬಸಪ್ಪ ಆಕ್ಷೇಪ
ಇನ್ನು, ಡಿಸಿ ಶುಭಾ ಕಲ್ಯಾಣ್ ನೇತೃತ್ವದಲ್ಲಿ ತುಮಕೂರು ಉಪವಿಭಾಗಾಧಿಕಾರಿ ನಹಿದಾ ಜಮ್ಜಮ್ಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಹಾಸನದಲ್ಲಿ ಸಚಿವ ಶಿವಲಿಂಗೇಗೌಡ, ಅಧಿಕಾರಿಗಳಿಗೆ ಬೆವರಿಳಿಸಿದರು. ಪ್ರಜಾ ಸೇವಾ ಇಲಾಖೆಯ ಕಾನೂನು ಓದ್ಕೊಳಿ. ಜನರನ್ನ ಅಲೆಸಬೇಡಿ ಎಂದು ತಾಕೀತು ಮಾಡಿದರು. ಇನ್ನೊಂದೆಡೆ, ಉತ್ತರ ಕನ್ನಡದಲ್ಲಿ ಮನವಿ ನೀಡಲು ನೂಕು ನುಗ್ಗಾಟ ಉಂಟಾಗಿದ್ದರಿಂದ ಸಾರ್ವಜನಿಕರ ವಿರುದ್ಧ ಸಚಿವ ಲಕ್ಷ್ಮಣ ಸವದಿ ಗರಂ ಆಗಿದ್ದಾರೆ. ಸೂಕ್ತ ವ್ಯವಸ್ಥೆ ಮಾಡದ್ದಕ್ಕೆ ಅಧಿಕಾರಿಗಳ ವಿರುದ್ಧವೂ ಸಿಟ್ಟಾಗಿದ್ದಾರೆ.
ಬೆಳಗಾವಿ, ಚಾಮರಾಜನಗರದ ಗುಂಡ್ಲುಪೇಟೆ, ಕೋಲಾರದ ವಕ್ಕಲೇರಿ, ಬೆಂಗಳೂರು ದಕ್ಷಿಣದ ಹಾರೋಹಳ್ಳಿ ಸೇರಿದಂತೆ ವಿವಿಧೆಡೆ ಆಯಾ ಜಿಲ್ಲೆಗಳ ಸಚಿವರು ಕಾರ್ಯಕ್ರಮ ಆಯೋಜಿಸಿದ್ದರು. ಇದನ್ನೂ ಓದಿ: ರಂಭಾಪುರಿ ಮಠಕ್ಕೆ ಸಿಎಂ ಭೇಟಿ; ಮಂಗಳಾರತಿಗೆ ಕಾಣಿಕೆ ಹಾಕುವಾಗ ಕೆಳಗೆ ಬಿದ್ದ 500 ರೂ. ನೋಟುಗಳು

