ತುಮಕೂರು: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕುಣಿಗಲ್ ತಹಶೀಲ್ದಾರ್ ಮತ್ತು ಇ.ಒ ಪರಸ್ಪರ ಕಿತ್ತಾಟ ಮಾಡಿಕೊಂಡಿದ್ದಾರೆ.
ಕುಣಿಗಲ್ ಪಟ್ಟಣದ ಕಂದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಯುತಿತ್ತು. ಆ ವೇಳೆ ಕುಣಿಗಲ್ ತಹಶಿಲ್ದಾರ್ ನಾಗರಾಜು ಹಾಗೂ ಇ.ಒ. ನಾರಾಯಣಸ್ವಾಮಿ ನಡುವೆ ಕಿತ್ತಾಟ ನಡೆದಿದೆ.
- Advertisement 2
ಸಭೆ ನಡೆಯುತ್ತಿದ್ದರೂ ಈ ಸಭೆಗೂ ನನಗೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಇ.ಒ.ನಾರಾಯಣಸ್ವಾಮಿ ಕಡತಗಳಿಗೆ ಸಹಿ ಹಾಕುವುದರಲ್ಲಿ ಮಗ್ನರಾಗಿದ್ದರು. ಈ ವರ್ತನೆಗೆ ಸಿಡಿಮಿಡಿಗೊಂಡ ತಹಶೀಲ್ದಾರ್ ನಾಗರಾಜು, ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಎಲ್ಲ ಜವಾಬ್ದಾರಿ ಇ.ಒ.ಸಾಹೇಬ್ರು ವಹಿಸಿಕೊಳ್ಳಬೇಕು ಎಂದಿದ್ದಾರೆ. ಅದಕ್ಕೆ ಇ.ಒ ನಾರಾಯಣಸ್ವಾಮಿ ನಾನೇಕೆ ಮಾಡಲಿ, ನೀವು ಸಮಿತಿ ಅಧ್ಯಕ್ಷರು ನೀವೇ ಜವಾಬ್ದಾರಿ ನಿರ್ವಹಿಸಿ ಎಂದು ಪ್ರತ್ಯುತ್ತರ ನೀಡಿದ್ದಾರೆ.
- Advertisement 3
ಪರಸ್ಪರ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ಗೊಂದಲ ವಾತಾವರಣ ಉಂಟಾಗಿದೆ. ಸಿಬ್ಬಂದಿ ಇಬ್ಬರ ಕಿತ್ತಾಟ ಕಂಡು ತಬ್ಬಿಬ್ಬಾಗಿದ್ದಾರೆ. ಬಳಿಕ ಮಧ್ಯಪ್ರವೇಶಿಸಿದ ಸಂಘಟನೆಗಳ ಮುಖಂಡರು ಇಬ್ಬರೂ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡು ಸಭೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.