ರಾಮನಗರ: ನಾನು ಬ್ಲ್ಯಾಕ್ ಇದ್ದೇನೆ, ಆದರೆ ಬ್ಲ್ಯಾಕ್ ಮೇಲರ್ (Blackmail) ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ತಿಳಿಸಿದ್ದಾರೆ.
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದರು. ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದನ್ನೂ ಓದಿ: 68ನೇ ರಾಷ್ಟ್ರ ಪ್ರಶಸ್ತಿ ಪಡೆದ ಸ್ಯಾಂಡಲ್ವುಡ್ ತಾರೆಯರು
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾನು ಬ್ಲ್ಯಾಕ್ ಇದ್ದೇನೆ, ಆದರೆ ಬ್ಲ್ಯಾಕ್ ಮೇಲರ್ ಅಲ್ಲ. ನಿಮಗೆ ಹಾಗೆ ಅನಿಸಿದ್ರೆ ನನಗೆ ಗೊತ್ತಿಲ್ಲ. ನೀವೇನೋ ಮಾಡಿಕೊಂಡಿರಬೇಕು. ನಾವು ಬೇರೆ ಜಿಲ್ಲೆಯ ಗುಂಡಾಗಳನ್ನು ಕರೆಯಿಸಿ ಪ್ರತಿಭಟನೆ (Protest) ಮಾಡಿಲ್ಲ. ನನ್ನ ಪಕ್ಷದಲ್ಲಿ ಇರೋರು ಗುಂಡಾಗಳಲ್ಲ, ರಾಮನಗರ ಜಿಲ್ಲೆ ಅಷ್ಟು ಅನಾಥ ಆಗಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಬೆನ್ನಿಗೆ ನಿಂತ ಉಪೇಂದ್ರ : ಸ್ನೇಹಿತ್ ಒಳ್ಳೆಯ ಹುಡುಗ
ರಾಮನಗರದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತಾರದೇ ಸಿಪಿ ಯೋಗೇಶ್ವರ್ ಕಾರ್ಯಕ್ರಮ ಉದ್ಘಾಟನೆ ಹೇಗೆ ಮಾಡಿದ್ರು? ಈ ಸಲ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ. ಸುಮ್ಮನೆ ಬಿಡಲ್ಲ, ಏಕೆಂದರೆ ಇದು ಸಾಮಾನ್ಯ ಹಕ್ಕುಚ್ಯುತಿ ಆಗಲ್ಲ. ಯಾವೆಲ್ಲ ಅಧಿಕಾರಿಗಳು ಇದ್ದಾರೋ ಅವರು ಸಸ್ಪೆಂಡ್ ಆಗಬೇಕು. 2023ರ ಚುನಾವಣೆ ದೂರ ಉಳಿದಿಲ್ಲ, ಅಧಿಕಾರಿಗಳು ಇದನ್ನು ತಿಳ್ಕೋಬೇಕು. ಒಂದು ಕಾರ್ಯಕ್ರಮ ಉದ್ಘಾಟನೆ ಮಾಡಲು ಸಾವಿರಾರು ಪೊಲೀಸ್ ಬೆಟಾಲಿಯನ್ ಹಾಕಿದ್ದೀರಿ, ಈ ರೀತಿಯಲ್ಲಿ ಉದ್ಘಾಟನೆ ಮಾಡಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ, ಅದನ್ನ ಮರೆತುಬಿಡಲಿ. ಮಂಡ್ಯದಲ್ಲಿ, ತುಮಕೂರಲ್ಲಿ ಲೋಕಸಭಾ ಚುನಾವಣೆಯಲ್ಲಿ ನನ್ನ ಮತ್ತು ನಮ್ಮ ಕುಟುಂಬವನ್ನ ಮುಗಿಸಬೇಕು, ಅಂತಾ ಕಾಂಗ್ರೆಸ್, ಬಿಜೆಪಿ ಒಂದಾಗಿತ್ತು. ಈಗ ರಾಮನಗರದಲ್ಲಿ ಮತ್ತೊಬ್ಬನನ್ನ ತಯಾರಿ ಮಾಡಿಬಿಟ್ಟಿದ್ದಾರೆ. ಈಗ ಚನ್ನಪಟ್ಟಣ, ರಾಮನಗರದಲ್ಲಿ ನನ್ನನ್ನು ಕಟ್ಟಿಹಾಕಲು ಬಿಜೆಪಿ, ಕಾಂಗ್ರೆಸ್ ಒಂದಾಗಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಆದ್ರೆ ನಾನು ಅಲ್ಲಿ ಜನರ ಮನೆಯ ಮಗನಾಗಿದ್ದೇನೆ, ಅವರು ಏನು ಮಾಡೋಕೆ ಆಗೋದಿಲ್ಲ. ನಾನು 2004 ನಂತರ ನನ್ನ ಕ್ಷೇತ್ರದ ಚುನಾವಣೆಯನ್ನ ನನ್ನ ಜನರು ಮಾಡಿದ್ದಾರೆ, ಕ್ಷೇತ್ರಗಳಲ್ಲಿ ನಾನು ಇರಲೇ ಇಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಶಕ್ತಿ ಕುಂದಿಸಲು ಆಗಲ್ಲ. ಇನ್ನು 6 ತಿಂಗಳು ಚುನಾವಣೆ ಇದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಹಿಡಿದಿಟ್ಟುಕೊಳ್ಳಲು ಆಗಲ್ಲ. ನಾನು ಅಧಿಕಾರ ಇರಲಿ ಇರದಿದ್ದರೂ ಒಂದೇ. ಇದು ನನ್ನ ವೀಕ್ನೆಸ್ ಅಂತಾ ತಿಳಿದುಕೊಂಡ್ರೆ ಗೊತ್ತಾಗುತ್ತೆ. ಅದೇನೊ ಇಡಿ, ಐಟಿ, ಬಿಟ್ಟು ಏನೇನೋ ಮಾಡ್ತಿದ್ದೀರಲ್ಲ. ಬಿಎಂಎಸ್ ಪ್ರಕರಣ ಸೆಶನ್ ನಲ್ಲಿ ದಾಖಲೆ ಇಟ್ಟಿದ್ದೇನೆ. ತನಿಖೆ ಆಗಲಿ ಯಾರೆಲ್ಲಾ ತಲೆ ಉರುಳುತ್ತೆ ಗೊತ್ತಾಗುತ್ತೆ. ಇನ್ನೂ 6 ತಿಂಗಳಲ್ಲಿ ಚುನಾವಣೆ ಇದೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡುವುದನ್ನು ನಾನು ಖಂಡಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.